“ಜೋಕರ್’ ಮೂಲಕ ಡೇಟಾ, ಹಣ ಕಳವು!

ಜೋಕರ್, ಟ್ರೋಜನ್ ಮಾಲ್ವೇರ್ ಗಳು ಆ್ಯಂಡ್ರಾಯ್ಡ್ ಮೊಬೈಲ್ ಗೆ ಲಗ್ಗೆ

Team Udayavani, Jun 18, 2021, 8:13 AM IST

joker malware in android mobile

ಬೆಂಗಳೂರು: ಬಹಮಾನದ ಆಸೆ, ಬ್ಯಾಂಕ್‌ ಅಧಿಕಾರಿ ಸೋಗು, ನವೀಕರಣ ಹೀಗೆ ನಾನಾ ಹೆಸರುಗಳಲ್ಲಿ ಕರೆ ಮಾಡಿ ಒಟಿಪಿ ಪಡೆದು ಅಥವಾ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್‌ ವಂಚಕರು ಈಗ ಹಣ ಮತ್ತು ಡೇಟಾ ಲೂಟಿಗೆ ಹೊಸ ತಂತ್ರ ಕಂಡುಕೊಂಡಿದ್ದಾರೆ.

ಸೈಬರ್‌ ವಂಚಕರು “ಜೋಕರ್‌’ ಅಥವಾ “ಟ್ರೋಜನ್‌’ ಎಂಬ ಹೊಸ ಮಾಲ್ವೇರ್‌ ಸೃಷ್ಟಿಸಿ ಆ್ಯಂಡ್ರಾಯ್ಡ ಮೊಬೈಲ್‌ಗ‌ಳನ್ನು ಹ್ಯಾಕ್‌ ಮಾಡಿ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಆ್ಯಂಡ್ರಾಯ್ಡ ಮೊಬೈಲ್‌ ಬಳಕೆದಾರರ ಬ್ಯಾಂಕಿಂಗ್‌, ಅಭಿರುಚಿ, ಸಂದೇಶ ಮತ್ತಿತರ ಆಸಕ್ತಿದಾಯಕ ಆ್ಯಪ್‌ಗ್ಳನ್ನು ಗುರಿಯಾಗಿ ಸಿಮಾಲ್ವೇರ್‌ ಇನ್‌ಸ್ಟಾಲ್‌ ಮಾಡಿಸಿ ವಂಚಿಸುತ್ತಿದ್ದಾರೆ. ಇವು ಒಮ್ಮೆ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆದ ಕೂಡಲೇ ಮೊಬೈಲ್‌ಗೆ ಬರುವ ಒಟಿಪಿ ಸಂದೇಶಗಳ ಸಹಿತ ಎಲ್ಲ ಗೌಪ್ಯ ಮಾಹಿತಿ ಸೈಬರ್‌ ವಂಚಕರ ಕೈ ಸೇರಲಿದೆ.

ಇಂಟರ್‌ನೆಟ್‌ನಲ್ಲೇ ಹೆಚ್ಚು ಸಮಯ ಕಳೆಯುವ ಜನರ ಆಸಕ್ತಿಯ ಬಗ್ಗೆ ಅರಿತುಕೊಳ್ಳುವ ಕಳ್ಳರು, ಅವರಿಗೆ ಅಗತ್ಯವಿರುವ ವಿಷಯಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಬ್ರೌಸರ್‌ಗಳಲ್ಲಿ ಪ್ರಕಟಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಆ್ಯಪ್‌ಗ್ಳು, ಸಂದೇಶ, ಇ-ಮೇಲ್‌ ಮೂಲಕವೂ ವಿವಿಧ ಆಮಿಷಗಳನ್ನೊಡ್ಡಿ ಲಿಂಕ್‌ ರೂಪದಲ್ಲಿ ಮಾಲ್ವೇರ್‌ ಕಳುಹಿಸುತ್ತಾರೆ. ಲಿಂಕ್‌ ಒತ್ತಿದರೆ ಮಾಲ್ವೇರ್‌ ಮೊಬೈಲ್‌ಗೆ ಇನ್‌ಸ್ಟಾಲ್‌ ಆಗುತ್ತವೆ. ಬಳಿಕ ಮೊಬೈಲ್‌ ಬಳಕೆದಾರರಿಗೆ ಅರಿವಿಲ್ಲದೆ ಅವರ ಡೇಟಾ, ಹಣ ಸೇರಿ ಎಲ್ಲವನ್ನು ಕಳವು ಮಾಡುತ್ತಾರೆ.

ಹೇಗೆ ಡೌನ್‌ಲೋಡ್‌ ಆಗುತ್ತವೆ?

ಜೋಕರ್‌ ಮಾಲ್ವೇರ್‌ ಗೂಗಲ್‌ ಪ್ಲೇಸ್ಟೋರ್‌ ಗಳ ಮೇಲೆ ದಾಳಿ ನಡೆಸುತ್ತವೆ. ಮುಖ್ಯವಾಗಿ ಚಂದಾದಾರರಾಗುವ ಆ್ಯಪ್‌ಗಳಲ್ಲಿ ಹೆಚ್ಚು ಸಕ್ರಿಯವಾಗಿವೆ. ಡೆಸ್ಟಿನೇಶನ್‌, ದೃಢಿಕೃತ ನಂಬರ್‌ ಗಳು ಸೇರಿ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೂರು ರೀತಿಯಲ್ಲಿ ಮೊಬೈಲ್‌ ಸೇರುತ್ತವೆ. ನೇರವಾಗಿ ಡೌನ್‌ ಲೋಡ್‌, ಆ್ಯಪ್‌ ಡೌನ್‌ಲೋಡ್‌ ಮಾಡುವ ಮೊದಲ ಹಂತದ ಮುಕ್ತಾಯಗೊಂಡಿದ್ದರೂ ಅಂತಿಮವಾಗಿ ಸ್ಟೇಜರ್‌ ಪೇಲೋಡ್‌ ಕೇಳುವುದು, ಈ ಎರಡು ಹಂತ ಅಂತಿಮವಾಗಿದ್ದರೂ ಪೇಲೋಡ್‌ ಮೂಲಕ ಡೌನ್‌ಲೋಡ್‌ ಕೇಳಿ ಮೊಬೈಲ್‌ ಸೇರಿಕೊಳ್ಳುತ್ತವೆ. ಬಳಿಕ ಹಂತಹಂತವಾಗಿ ಹಣ ಲೂಟಿ ಮಾಡುತ್ತವೆ ಎಂದು ಸೈಬರ್‌ ತಜ್ಞರು ವಿವರಿಸುತ್ತಾರೆ.

ಬಳಕೆದಾರರು ಕಡ್ಡಾಯವಾಗಿ ಯಾವುದೇ ಆ್ಯಪ್‌ ಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳುವ  ಮೊದಲು ಅವುಗಳ ವಿಮರ್ಶೆ, ಪ್ರತಿಕ್ರಿಯೆಗಳನ್ನು ಗಮನಿಸ ಬೇಕು. ಸ್ಕ್ಯಾನರ್‌, ಪಿಡಿಎಫ್ಅ ನಂತರ ಆ್ಯಪ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸೈಬರ್ ತಜ್ಞೆ ಶುಭ ಮಂಗಳಾ.

ಮಾಲ್ವೇರ್‌ನಿಂದ ಏನಾಗುತ್ತದೆ?

-ಹೊರಹೋಗುವ ಮತ್ತು ಒಳ ಬರುವ ಸಂದೇಶಗಳ ಸೋರಿಕೆ

-ಮೊಬೈಲ್‌ನಲ್ಲಿನ ಕೀಬೋರ್ಡ್‌ ಇನ್‌ಪುಟ್‌ ಅಪರಿಚಿತ ವ್ಯಕ್ತಿ ಬಳಸಹುದು.

-ಡಿವೈಸ್‌ನಲ್ಲಿರುವ ಆ್ಯಪ್‌ಗಳ ಪಟ್ಟಿ, ವಿವರ, ಲೋಕೇಶನ್‌, ಡೇಟಾ ಕಳವು

-ಮೊಬೈಲ್‌ ಲಾಕ್‌ ಆಗುವ ಸಾಧ್ಯತೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.