
ಕೆಂಪೇಗೌಡ ಪ್ರತಿಮೆ ಅನಾವರಣ ಬಿಜೆಪಿ ಕಾರ್ಯಕ್ರಮವಾಗಿತ್ತು: ಎಂ.ಬಿ. ಪಾಟೀಲ್ ವ್ಯಂಗ್ಯ
Team Udayavani, Nov 12, 2022, 3:16 PM IST

ಬೆಂಗಳೂರು: ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ವಿಪಕ್ಷದ ನಾಯಕರನ್ನು ಶಿಷ್ಟಾಚಾರದ ಪ್ರಕಾರ ಕರೆಯದೇ ಇದ್ದದ್ದು ತಪ್ಪು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿಪಕ್ಷ ನಾಯಕರಿಗೆ ಕೆಲವೊಂದು ಹಕ್ಕು ಇದೆ. ಅವುಗಳ ಉಲ್ಲಂಘನೆ ಆಗಿದೆ. ದೇವೇಗೌಡರಿಗೆ ಆಹ್ವಾನ ಕೂಡ ನೀಡಿಲ್ಲ. ಕೆಂಪೇಗೌಡ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಆಗಿತ್ತು ಎಂದು ವ್ಯಂಗ್ಯ ವಾಡಿದರು.
ಕೆಂಪೇಗೌಡ ಒಂದೇ ಸಮುದಯಕ್ಕೆ ಸೇರಿದವರಲ್ಲ. ಅವರನ್ನು ಒಂದು ಜಾತಿಗೆ ಸೇರಿಸುತ್ತಿರುವುದು ತಪ್ಪ. ಈ ವಿಮಾನ ನಿಲ್ದಾಣವಾಗುವುದಕ್ಕೆ ಎಸ್.ಎಂ. ಕೃಷ್ಣ ಪ್ರಮುಖ ಕಾರಣ. ಅವರಿಗೂ ಆಹ್ವಾನ ನೀಡಬೇಕಿತ್ತು. ಕೆಂಪೇಗೌಡ ಈ ನಾಡಿನ ಆಸ್ತಿ, ಎಲ್ಲರನ್ನೂ ಕರೆದು ಹಬ್ಬದ ರೀತಿಯಲ್ಲಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ವಿಧಾನಸೌಧ ಮುಂದೆ ಬಸವಣ್ಣ ಪ್ರತಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಚರ್ಚೆ ಬಹಳ ದಿನಗಳಿಂದ ಇದೆ. ಬಸವಣ್ಣ ಈ ನಾಡಿನ ಆಸ್ತಿ. ಅವರ ಪ್ರತಿಮೆ ಆದಷ್ಟು ಬೇಗ ಆಗಬೇಕು. ಒಂದು ಸಮುದಾಯಕ್ಕೆ ಸಿಮೀತವಾದ ವ್ಯಕ್ತಿ ಬಸವಣ್ಣ ಅಲ್ಲ. ಹಲವು ಮಹಾತ್ಮರು ಈ ನಾಡಿನಲ್ಲಿ ಇದ್ದಾರೆ. ಕನಕದಾಸರು, ಕುವೆಂಪು, ರಾಣಿ ಚೆನ್ನಮ್ಮ.. ಇನ್ನೂ ಅನೇಕ ಮಹಾತ್ಮರು ಇದ್ದಾರೆ. ಅವರ ಪ್ರತಿಮೆಗೆಳನ್ನು ಸಹ ಸರ್ಕಾರ ಬೇರೆ ಜಾಗದಲ್ಲಿ ನಿರ್ಮಿಸಲಿ ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ

ಬಿ. ಎಲ್ ಸಂತೋಷ್ ಭಾಷಣಕ್ಕೆ ಅಧಿಕಾರಿಗಳ ಆಕ್ಷೇಪ… ಬಿಜೆಪಿ ಸಭೆಯಲ್ಲಿ ಆಗಿದ್ದೇನು?

ಮತ್ತೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ