“ಉದಯವಾಣಿ’ ಕಚೇರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ
Team Udayavani, Aug 17, 2021, 10:03 AM IST
ಉಡುಪಿ, ಆ. 16 : ಮಣಿಪಾಲದ “ಉದಯವಾಣಿ’ ಕಚೇರಿಗೆ ಸೋಮವಾರ ಭೇಟಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಣಿಪಾಲ್ ಟೆಕ್ನಾಲಜೀಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭ ರಾಜ್ಯ ಮತ್ತು ದೇಶದ ವಿದ್ಯಮಾನಗಳ ಕುರಿತು ಸಚಿವರೊಂದಿಗೆ ಗೌತಮ್ ಪೈ ಅವರು ಚರ್ಚಿಸಿದರು. ಕೊರೊನಾ ಕಾರಣದಿಂದ ಉಂಟಾದ ಸಂಕಟ ದಿಂದ ಮಾರುಕಟ್ಟೆಗಳು ಸಹಜಸ್ಥಿತಿಗೆ ಬರಬೇಕಾಗಿವೆ. ಇದಕ್ಕೆ ಬೇಕಾದ ಸರ್ವಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರ ತೆಗೆದುಕೊಳ್ಳಬೇಕು ಎಂದು ಗೌತಮ್ ಪೈ ಅಭಿಪ್ರಾಯಪಟ್ಟರು.
ಎಲ್ಲರಿಗೂ ವ್ಯಾಕ್ಸಿನ್ ವಿತರಣೆಗೆ ಸರಕಾರ ಕ್ರಮ ವಹಿಸುತ್ತದೆ. ಕೇಂದ್ರದಿಂದ ಶೀಘ್ರವೇ ಹೆಚ್ಚುವರಿ ವ್ಯಾಕ್ಸಿನ್ ಲಭ್ಯವಾಗಲಿದೆ. ಅನಂತರ ಇನ್ನಷ್ಟು ಕೇಂದ್ರಗಳಲ್ಲಿ ವಿತರಿಸಲಾಗು ತ್ತದೆ ಎಂದು ಸಚಿವರು ತಿಳಿಸಿದರು. ಸಚಿವ ಶ್ರೀನಿವಾಸ ಪೂಜಾರಿ ಅವರು ಉದಯವಾಣಿ ಆನ್ಲೈನ್ ಸಂದರ್ಶನದಲ್ಲಿ ಪಾಲ್ಗೊಂಡರು. “