ಬಜೆಟ್ ವೆಚ್ಚದ ಮೇಲೆ ಕೋವಿಡ್ ಹೊಡೆತ?
ಸಾಲದ ಬಳಿಕವೂ 30 ಸಾವಿರ ಕೋ.ರೂ. ಕೊರತೆ
Team Udayavani, Jan 2, 2021, 8:21 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಹಾವಳಿ ರಾಜ್ಯದ ಆರ್ಥಿಕತೆಗೆ ನೀಡಿರುವ ಹೊಡೆತ ದೀರ್ಘಾವಧಿ ಪರಿಣಾಮ ಬೀರಿದ್ದು, ಪ್ರಸಕ್ತ ಸಾಲಿನಲ್ಲಿ ಬಜೆಟ್ನಲ್ಲಿ ಘೋಷಿಸಿದ ರಾಜಸ್ವದಲ್ಲಿ 65 ಸಾವಿರ ಕೋ.ರೂ. ಇಳಿಕೆಯಾಗುವ ನಿರೀಕ್ಷೆ ಇದೆ. ಈ ಪೈಕಿ 33 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಪಡೆದರೂ 30 ಸಾವಿರ ಕೋಟಿ ರೂ.ಗಳಷ್ಟು ಕೊರತೆ ಬೀಳಲಿದೆ.
ಆದಾಯ ಮೂಲವೂ ಇಲ್ಲದೆ, ಸಾಲದ ಅವಕಾಶವೂ ಇರದ ಕಾರಣ ಅನು ದಾನ ಕಡಿತವೊಂದೇ ಸದ್ಯದ ಪರಿಹಾರ ಸೂತ್ರವೆನಿಸಿದ್ದು, ಮುಂದಿನ ಬಜೆಟ್ ಮೇಲೂ ಇದು ಪರಿಣಾಮ ಬೀರುವುದು ನಿಶ್ಚಿತ. ಹಾಗಾಗಿ ಬೃಹತ್ ಮೊತ್ತ, ಭಾರೀ ವೆಚ್ಚದ ಯೋಜನೆಗಳನ್ನು ಸದ್ಯಕ್ಕೆ ಆರಂಭಿಸದಂತೆ ಸೂಚಿಸಲಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಪ್ರಮುಖ ಇಲಾಖೆಗಳ ಅನುದಾನ ಬಿಡುಗಡೆಯಲ್ಲಿ ವ್ಯತ್ಯಯವಾಗಬಹುದು ಎನ್ನಲಾಗಿದೆ.
ಶೇ. 45ರಷ್ಟು ಅನುಷ್ಠಾನ?
ಕೋವಿಡ್ನಿಂದಾಗಿ ಬಜೆಟ್ ಅನುಷ್ಠಾನವೂ ನಿರೀಕ್ಷಿತ ಪ್ರಮಾಣದಲ್ಲಿಲ್ಲ. 3ನೇ ತ್ತೈಮಾಸಿಕ ಅವಧಿ ಕಳೆಯುವ ಹೊತ್ತಿಗೂ ಬಜೆಟ್ ಅನುಷ್ಠಾನವು ಅರ್ಧದಷ್ಟು ಗುರಿ ಸಾಧಿಸಲು ಹೆಣಗಾಡುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಬಜೆಟ್ ಅನುಷ್ಠಾನ ಪ್ರಮಾಣ ಶೇ. 45ರ ಆಸು ಪಾಸಿ ನಲ್ಲಿತ್ತು. ಪ್ರಮುಖ ಇಲಾಖೆ ಗಳ ಬಾಕಿ ಬಿಲ್ ಪಾವತಿಗೆ ದೊಡ್ಡ ಮೊತ್ತದ ಅನುದಾನ ಆಗಾಗ ಬಿಡುಗಡೆ ಯಾಗಿದೆ. ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳಲ್ಲೇ ಶೇ. 25ರಿಂದ ಶೇ. 30ರಷ್ಟು ಅನುದಾನ ಬಳಕೆಯಾಗುವುದು ವಾಡಿಕೆ. ಅದರಂತೆ ವರ್ಷಾಂತ್ಯದೊಳಗೆ ಲಭ್ಯವಿರುವ ಅನುದಾನ ಬಳಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ರಾಜಸ್ವ ಸಂಗ್ರಹ ಇಳಿಕೆ
2020-21ನೇ ಸಾಲಿನಲ್ಲಿ ಒಟ್ಟು 1.79 ಲಕ್ಷ ಕೋ.ರೂ. ರಾಜಸ್ವ ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ತೆರಿಗೆ ಆದಾಯ ಖೋತಾ ಆಗಿದ್ದು ಸರಕಾರವು ರಾಜಸ್ವ ನಿರೀಕ್ಷೆಯನ್ನು 1.14 ಲಕ್ಷ ಕೋಟಿ ರೂ.ಗೆ ಇಳಿಸಿದೆ. ಅಂದರೆ ನಿರೀಕ್ಷಿತ ರಾಜಸ್ವದಲ್ಲಿ 65,000 ಕೋಟಿ ರೂ. ಕೈತಪ್ಪುವುದನ್ನು ಸರಕಾರವೇ ಒಪ್ಪಿಕೊಂಡಂತಾಗಿದೆ.
ಆದಾಯ ಖೋತಾ-ವೆಚ್ಚ ಹೆಚ್ಚಳ
ಕೊರೊನಾದ ಪರಿಣಾಮವಾಗಿ ಸದ್ಯ ಆದಾಯ ಖೋತಾ- ವೆಚ್ಚ ಹೆಚ್ಚಳ ಎಂಬ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತುರ್ತು ಅಲ್ಲದ, ಮುಂದೂಡ ಬಹುದಾದ ಯೋಜನೆ, ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಕೈಬಿಡುವ ಮೂಲಕ ಕೊರತೆ ಪ್ರಮಾಣ ತಗ್ಗಿಸುವತ್ತ ಪ್ರಯತ್ನ ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಿ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ