ತ್ರಿಪಕ್ಷೀಯ ಪದ್ಧತಿ ಜಾರಿ ಆಗಲಿ; ಶ್ರೀಕಂಠೇಗೌಡ
Team Udayavani, Mar 12, 2020, 3:04 AM IST
ವಿಧಾನ ಪರಿಷತ್ತು: ದೇಶದಲ್ಲಿ ಬಹುಪಕ್ಷೀಯ ಪದ್ಧತಿ ಕೈಬಿಟ್ಟು, ತ್ರಿಪಕ್ಷೀಯ ಪದ್ಧತಿ ಜಾರಿಯಾಗಬೇಕು ಎಂದು ಜೆಡಿಎಸ್ನ ಶ್ರೀಕಂಠೇಗೌಡ ಹೇಳಿದರು. ಮೇಲ್ಮನೆಯಲ್ಲಿ ಬುಧವಾರ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಸದ್ಯ ದೇಶದಲ್ಲಿ 2,599 ನೋಂದಾಯಿತ ರಾಜಕೀಯ ಪಕ್ಷಗಳಿವೆ.
ಇದರಲ್ಲಿ ಎಂಟು ರಾಷ್ಟ್ರೀಯ ಮತ್ತು 53 ಪ್ರಾದೇಶಿಕ ಪಕ್ಷಗಳೂ ಸೇರಿವೆ. ವಿಚಿತ್ರವೆಂದರೆ, ಸಂವಿಧಾನದಲ್ಲಿ ಈ ರಾಜಕೀಯ ಪಕ್ಷಗಳಿಗೆ ಅವಕಾಶವನ್ನೇ ನೀಡಿಲ್ಲ. ಸಂಘ-ಸಂಸ್ಥೆಗಳಿಗೆ ಅವಕಾಶ ನೀಡಿದ್ದು, ಅದರಡಿ ನೋಂದಣಿ ಆಗುತ್ತಿವೆ ಎಂದರು. ದಿನಕ್ಕೊಂದು ಪಕ್ಷ ಹುಟ್ಟುತ್ತಿದೆ, ಮತ್ತು ಸಾಯುತ್ತಿದೆ. ಈ ಬಹುಪಕ್ಷೀಯ ಪದ್ಧತಿಗೆ ತಿಲಾಂಜಲಿ ಹಾಡಬೇಕು. ವಿದೇಶಗಳಲ್ಲಿ ದ್ವಿಪಕ್ಷೀಯ ಪದ್ಧತಿ ಇರುವಂತೆ ನಮ್ಮಲ್ಲಿ ತ್ರಿಪಕ್ಷೀಯ ಪದ್ಧತಿ ಜಾರಿಯಾಗಬೇಕು.
ಇದರಡಿ ತಲಾ ಮೂರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು, ಅಗತ್ಯ ತಿದ್ದುಪಡಿ ತರುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಸಂವಿಧಾನದ ಕುರಿತು ಎಲ್ಲ ರಾಜ್ಯಗಳ ವಿಧಾನ ಮಂಡಲಗಳಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಮಾರ್ಶೆ ಆಗಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು