ಎನ್ಐಎ ತೆರೆಯಲು ಕೇಂದ್ರಕ್ಕೆ ಪತ್ರ
Team Udayavani, Jul 13, 2017, 2:05 AM IST
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜಿಹಾದಿ ಸಂಘಟನೆಗಳಿಗೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಕಚೇರಿ ಆರಂಭಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಕೇರಳದಿಂದ ಕಾಸರಗೋಡು ಮೂಲಕ ಮಂಗಳೂರಿಗೆ ಬರುತ್ತಿರುವ ಜಿಹಾದಿ ಶಕ್ತಿಗಳು ರಾಜ್ಯದ ಕರಾವಳಿ ಭಾಗದಲ್ಲಿ
ಕಾರ್ಯಾಚರಣೆ ನಡೆಸುತ್ತಿವೆ ಎಂಬುದನ್ನು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಗಳು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಆದ್ದರಿಂದ ಇಂತಹ ಪ್ರಕರಣಗಳ ಬಗ್ಗೆ ಎನ್ಐಎ ಕಣ್ಣಿಡಬೇಕಾಗಿದ್ದು, ಅದಕ್ಕಾಗಿ ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಮೂಲಭೂತವಾದಿಗಳಿಗೆ ಕಾಂಗ್ರೆಸ್ ರಕ್ಷಣೆ:
ವೋಟ್ಬ್ಯಾಂಕ್ಗಾಗಿ ಕಾಂಗ್ರೆಸ್ ಸರ್ಕಾರ ಇಸ್ಲಾಂ ಮೂಲಭೂತವಾದಿಗಳಿಗೆ ರಕ್ಷಣೆ ನೀಡುತ್ತಾ ಹಿಂದೂಗಳ ಹತ್ಯೆ ನಡೆದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದರೆ ಬಿಜೆಪಿ ಹಿಂದೂ ಯುವಕರ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಅಮಾಯಕರ ಪ್ರಾಣ ಬಲಿಕೊಟ್ಟು ರಾಜಕಾರಣ ಮಾಡುವ ನೀಚ ಮಟ್ಟಕ್ಕೆ ಎಂದೂ ಇಳಿಯುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಜಿಹಾದಿ ಚಟುವಟಿಕೆಗಳಿಗೆ ಇಸ್ಲಾಂ ಮೂಲಭೂತವಾದಿಗಳು ಗೋಕಳ್ಳತನ, ರಮಾನಾಥ ರೈ ನೇತೃತ್ವದಲ್ಲಿ ಮರಳು ಮಾμಯಾ ಮತ್ತು ಡ್ರಗ್ ಮಾμಯಾದ ಮೂಲಕ ಹಣ ಒದಗಿಸುತ್ತಿದ್ದಾರೆ. ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳು ಈ ಎಲ್ಲಾ ಕೃತ್ಯಗಳ ಹಿಂದಿವೆ. ಈ ಬಗ್ಗೆ ಹಿಂದೆಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.