ಕಾಂಗ್ರೆಸ್ ಗೆದ್ದು ಬಂದರೆ ಸಿಎಂ ಆಗೋದು, ಈಗ ಹೇಗೆ ಸಿಎಂ ಆಗ್ತಾರೆ : ಮಾಧುಸ್ವಾಮಿ ವ್ಯಂಗ್ಯ
Team Udayavani, Jun 28, 2021, 2:16 PM IST
ಚಿತ್ರದುರ್ಗ : ಬಾಂಬೆ-ಬೆಳಗಾವಿ ನಿಕಟ ಸಂಪರ್ಕ ಹೊಸದೇನಲ್ಲ, ರಮೇಶ ಜಾರಕಿಹೊಳಿ ಕೇಸ್ ನಿಂದ ಮುಕ್ತರಾದರೆ ಮಂತ್ರಿ ಆಗ್ತಾರೆ. ಈ ಕೇಸ್ ವಿಚಾರದಲ್ಲಿ ಸರ್ಕಾರ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ರಮೇಶ್ ಜಾರಕಿಹೊಳಿ ಫಡ್ನವಿಸ್ ಭೇಟಿ ಬಗ್ಗೆ ಚಿತ್ರದುರ್ಗದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿಗಾಗಿ ಕಚ್ಚಾಟ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಗೆದ್ದು ಬಂದರೆ ಸಿಎಂ ಆಗೋದು, ಈಗ ಹೇಗೆ ಸಿಎಂ ಆಗ್ತಾರೆ. ಕಳೆದ ಸಲ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಯಾರಿಗೆ ಗೊತ್ತಿತ್ತು. ರಾಜಕಾರಣ ಹೇಗೆ ತಿರುಗುತ್ತದೆ, ಯಾರಿಗೆ ಗೊತ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ದ ಸಚಿವ ಮಾಧುಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕೋವಿಡ್ ಡೆತ್ ರಿಪೋರ್ಟ್ ಮರೆ ಮಾಚುವ ಸ್ಥಿತಿ ಬಂದಿಲ್ಲ. ಕೊಮಾರ್ಬಿಡ್ ಡೆತ್, ಕ್ರಾನಿಕ್ ಡಿಸೇಸ್ ಡೆತ್ ಆಗ್ತಿದೆ. ಅಕಾಸ್ಮಾತ್ ರಿಪೋರ್ಟ್ ಆಗದೆ ಡೆತ್ ಆಗಿದ್ದರೆ ನಾವೇನು ಮಾಡೋಕಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ವಿದ್ಯಾಗಮ ಆರಂಭಕ್ಕೆ ಸರ್ಕಾರ ಚಿಂತನೆ ವಿಚಾರವಾಗಿ ಮಾತನಾಡಿದ ಮಾಧುಸ್ವಾಮಿ, ಕೊರೊನಾ 3ನೇ ಅಲೆ, ಡೆಲ್ಟಾ ಪ್ಲಸ್ ಬಗ್ಗೆ ಪರಿಶೀಲಿಸಿ ವಿದ್ಯಾಗಮ ಸಾಧ್ಯತೆ ಇದೆ. ಇನ್ನೊಂದು ತಿಂಗಳು ಕಾದು ನೋಡಿ ವಿದ್ಯಾಗಮ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.