ಈಗಿರುವ ಎಲ್ಲಾ ಸಚಿವರನ್ನು ಕೈಬಿಟ್ಟು, ಹೊಸ ಸಂಪುಟ ರಚಿಸಿ: ಬಿಜೆಪಿ ಶಾಸಕ ಶಿವನಗೌಡ ನಾಯಕ್
Team Udayavani, Jan 19, 2021, 4:36 PM IST
ಬೆಂಗಳೂರು: ಬಿಎಸ್ ವೈ ಸಂಪುಟದಲ್ಲಿ ಈಗಿರುವ ಎಲ್ಲಾ 32 ಸಚಿವರನ್ನೂ ಕೈಬಿಟ್ಟು, ಹೊಸದಾಗಿ ಸಂಪುಟ ರಚನೆ ಮಾಡಿ ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಸಲಹೆ ನೀಡಿದ್ದಾರೆ.
20 ತಿಂಗಳು ಸಚಿವರಾದವರನ್ನು ಕೈ ಬಿಟ್ಟು ಅವರಿಗೆ ಕೈಬಿಡುವವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೊಡಿ. ಸಂಪೂರ್ಣ ಸಂಪುಟವನ್ನೇ ಪುನಾರಚಿಸಿ, ಹಿರಿತನದ ಆಧಾರದ ಮೇಲೆ 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಿವನಗೌಡ ನಾಯಕ್ ಹೇಳಿದರು.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ 92ರೂ.
ಎಲ್ಲಾ ಜಿಲ್ಲೆ, ಸಾಮಾಜಿಕ ಪ್ರಾತಿನಿಧ್ಯದಂತೆ ಸಚಿವರನ್ನು ಮಾಡಬೇಕು. ಕೆಳ ಹಂತದ ನಾಯಕರಿಗೆ ಅವಕಾಶ ಕೊಡಬೇಕು. ಇದು ನಮ್ಮ ಮೂಲೆ ಮೂಲೆಯ ಶಾಸಕರ ಅಭಿಪ್ರಾಯ ಎಂದರು.
ಇದನ್ನೂ ಓದಿ:ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?
ಬ್ಲಾಕ್ ಮೇಲರ್ಸ್ ಗೆ ಸಚಿವ ಸ್ಥಾನ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಬ್ಲಾಕ್ ಮೇಲ್ ಎನ್ನುವುದು ಹೊರಗಡೆ ನಡೆದಿದೆ. ನಮ್ಮಲ್ಲಿ ಆ ರೀತಿ ಯಾವುದೂ ಆಗಿಲ್ಲ ಎಂದರು.