ವಾಸ್ತು ಪ್ರಕಾರ ಶಿರಾಡಿ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಸಚಿವ ರೇವಣ್ಣ
Team Udayavani, Jul 15, 2018, 1:43 PM IST
ಹಾಸನ : ಕರಾವಳಿಯನ್ನು ರಾಜ್ಯ ರಾಜಧಾನಿಯ ಜತೆಗೆ ಬೆಸೆಯುವ ಸಂಪರ್ಕ ಸೇತು ಶಿರಾಡಿ ಘಾಟಿಯ ಹೊಸ ಕಾಂಕ್ರೀಟ್ ರಸ್ತೆ ರವಿವಾರ ಉದ್ಘಾಟನೆಗೊಂಡಿದೆ.
ವಾಸ್ತು ಪ್ರಕಾರ
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವಾಸ್ತು ಪ್ರಕಾರವೇ ರಿಬ್ಬನ್ ಕತ್ತರಿಸಿ ರಸ್ತೆ ಉದ್ಘಾಟಿಸಿದರು. ಪಶ್ಚಿಮಾಭಿಮುಖವಾಗಿ ನಿಂತು ರಿಬ್ಬನ್ ಕತ್ತರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿಸಿದ್ದರು.
ವಾಸ್ತು ಪ್ರಕಾರ ಹೀಗೆ ಕತ್ತರಿಸುವುದು ಸರಿಯಲ್ಲ ಎಂದು ತಿಳಿದ ಸಚಿವ ರೇವಣ್ಣ ತನ್ನೊಂದಿದ್ದ ಸಚಿವ ಯು.ಟಿ.ಖಾದರ್ , ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಅಧಿಕಾರಿಗಳು ವಿರುದ್ದ ದಿಕ್ಕಿನತ್ತ ನಿಲ್ಲುವಂತೆ, ಅಂದರೆ ಪೂರ್ವಾಭಿಮುಖವಾಗಿ ನಿಂತು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಕಾಮಗಾರಿ ಸಂಬಂಧ 6 ತಿಂಗಳಿಂದ ಈ ರಸ್ತೆ ಮುಚ್ಚಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದ್ದು, ತಡೆಗೋಡೆ ಹಾಗೂ ರಸ್ತೆ ಅಂಚಿಗೆ ಮಣ್ಣು ಹಾಕುವ ಒಂದಷ್ಟು ಕೆಲಸ ಬಾಕಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ