ಒಂದು ರಾಷ್ಟ್ರ ಒಂದು ಪಡಿತರ: ಅಧಿಕೃತ ಆದೇಶ
Team Udayavani, Apr 30, 2021, 6:13 AM IST
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರು “ಒಂದು ರಾಷ್ಟ್ರ ಒಂದು ಪಡಿತರ’ ಯೋಜನೆಯಡಿ ತಮ್ಮ ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಹೆಬ್ಬೆರಳಿನ ಮುದ್ರೆ ನೀಡಿ ಯಾವುದೇ ರಾಜ್ಯದ ನ್ಯಾಯಬೆಲೆ ಅಂಗಡಿಯಿಂದಲೂ ಪಡಿತರ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ.
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರು ಸಹಾಯವಾಣಿ 14445ಕ್ಕೆ ಕರೆ ಮಾಡಿ ತಾವು ಪಡಿತರ ಪಡೆಯಲು ಇಚ್ಛಿಸುವ ನಿರ್ದಿಷ್ಟ ರಾಜ್ಯ, ಜಿಲ್ಲೆ, ಸ್ಥಳದ ಬಗ್ಗೆ ನೋಂದಣಿ ಮಾಡಿಕೊಳ್ಳಬಹುದು. ಕೇಂದ್ರ ಸರಕಾರ ಮೇರಾ ರೇಷನ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಗೂಗಲ್ ಸ್ಟೋರ್ನಿಂದ ಡೌನ್ಲೋಡ್ ಮಾಡಿ ಬಳಸಬಹುದೆಂದು ಆಯುಕ್ತ ಡಾ| ಶಾಮ್ಲಾ ಇಕ್ಬಾಲ್ ತಿಳಿಸಿದ್ದಾರೆ.