ಹಿರಿಯ ನಾಗರಿಕರಿಗೆ ಪಿಂಚಣಿ ನೀಡಲು ಬದ್ಧ: ಕುಮಾರಸ್ವಾಮಿ
Team Udayavani, Jun 4, 2018, 7:31 PM IST
ಬೆಂಗಳೂರು : 65 ವರ್ಷ ಮೀರಿದ ಹಿರಿಯ ನಾಗರಿಕೆ ಪಿಂಚಣಿ ನೀಡುವ ಭರವಸೆಗೆ ನಾನು ಬದ್ಧನಿದ್ದು ಅದನ್ನು ಮುಂದಿನ ಬಜೆಟ್ನಲ್ಲಿ ಜಾರಿಗೊಳಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಾವು ಕಾಲೇಜು ಶಿಕ್ಷಣ ಪಡೆದಿದ್ದ ನಗರದ ನ್ಯಾಶನಲ್ ಕಾಲೇಜಿನ ಆಡಳಿತ ಮಂಡಳಿ ನೀಡಿದ ಸಮ್ಮಾನವನ್ನು ಸ್ವೀಕರಿಸಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಸರಕಾರದ ಬೊಕ್ಕಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕಾಗಿದೆ ಎಂದು ಕುಮಾರ ಸ್ವಾಮಿ ಹೇಳಿದರು.