“ಪ್ರಾಣವಾಯು’ ಒದಗಿಸಿ 10 ರೋಗಿಗಳ ಜೀವ ಉಳಿಸಿದ ಪೊಲೀಸ್ ಇನ್ಸ್ಪೆಕ್ಟರ್
Team Udayavani, May 5, 2021, 7:40 AM IST
ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 10 ಮಂದಿ ಮೃತಪಟ್ಟ ಆತಂಕದ ಘಟನೆ ನಡುವೆ ಲಾಕ್ ಡೌನ್ ಸಂದರ್ಭ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಸುಮಾರು 10 ಮಂದಿ ರೋಗಿಗಳ ಜೀವ ಉಳಿಸಿದ್ದಾರೆ.
ನ್ಯೂಟೌನ್ನಲ್ಲಿರುವ ಖಾಸಗಿ ಆಸ್ಪತ್ರೆ ಎದುರು ಗಲಾಟೆ ನಡೆಯುತ್ತಿದ್ದುದನ್ನು ಗಮನಿಸಿ ಅಲ್ಲಿಗೆ ಭೇಟಿ ನೀಡಿದಾಗ ಇನ್ಸ್ಪೆಕ್ಟರ್ಗೆ ಅಲ್ಲಿನ ಪರಿಸ್ಥಿತಿ ತಿಳಿಯಿತು. ಸುಮಾರು 8-10 ಮಂದಿ ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದ ಬಳಲುತ್ತಿದ್ದರು. ತತ್ಕ್ಷಣ ಅವರು ಸ್ಥಳೀಯ ಶಾಸಕರು ಮತ್ತು ನಟ ಸೋನು ಸೂದ್ ಟ್ರಸ್ಟ್ ಮೂಲಕ 8-10 ಆಕ್ಸಿಜನ್ ಸಿಲಿಂಡರ್ಗಳನ್ನು ಆಸ್ಪತ್ರೆಗೆ ತರಲು ವ್ಯವಸ್ಥೆ ಮಾಡಿದರು. ಬಳಿಕ ಎಲ್ಲ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತು.
ಇನ್ಸ್ಪೆಕ್ಟರ್ ಅವರ ಸಮಯಪ್ರಜ್ಞೆಯಿಂದ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ್ದರಿಂದ ಆಸ್ಪತ್ರೆಯಲ್ಲಿದ್ದ 10 ಮಂದಿ ಸೋಂಕಿತರು ಬದುಕಿಳಿದರು. ಇಲ್ಲದಿದ್ದರೆ ಅವರೆಲ್ಲ ಮೃತಪಡುವ ಸಾಧ್ಯತೆಯಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.