ಕಿಡ್ನಿ ಸಮಸ್ಯೆ: ಪತ್ರಿಕಾ ಛಾಯಾಚಿತ್ರಕಾರ ಕೇಶವ ವಿಟ್ಲ ವಿಧಿವಶ
Team Udayavani, May 28, 2018, 10:51 AM IST
ಮಂಗಳೂರು : ಪತ್ರಿಕಾ ಛಾಯಾಚಿತ್ರಕಾರ ಕೇಶವ ವಿಟ್ಲ (56) ಇಂದು ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ವರದಿಯಾಗಿದೆ.
ಕೇಶವ ವಿಟ್ಟ ಅವರು 1984ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಛಾಯಾಚಿತ್ರ ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. 1996ರಲ್ಲಿ ಅವರು ಇಂಡಿಯನ್ ಎಕ್ಸ್ಪ್ರೆಸ್ ಬಳಗವನ್ನು ಸೇರಿಕೊಂಡು ಅಲ್ಲಿ ಹಲವು ವರ್ಷ ಕಾಲ ದುಡಿದರು. ಅನಂತರ ಹವ್ಯಾಸಿ ಸ್ವತಂತ್ರ ಛಾಯಾಚಿತ್ರ ಪತ್ರಕರ್ತರಾಗಿ ಅವರು ದ ಟೆಲಿಗ್ರಾಫ್, ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಗಳಿಗಾಗಿ ದುಡಿದರು.
ಕೇಶವ ವಿಟ್ಟ ಅವರು ಈಚೆಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ವಿಧಿವಶರಾದರು ಎಂದ ಮಾದ್ಯಮ ವರದಿಗಳು ತಿಳಿಸಿವೆ.