ರಾತ್ರಿ ಕಾದು ಕುಳಿತು ತೀರ್ಪು ಆಲಿಸಿದ ಪುತ್ತಿಗೆ ಶ್ರೀ
Team Udayavani, Nov 10, 2019, 3:00 AM IST
ಉಡುಪಿ: ಅಯೋಧ್ಯೆ ತೀರ್ಪು ಶನಿವಾರ ಬೆಳಗ್ಗೆ ಬಿತ್ತರಗೊಳ್ಳುತ್ತಿದ್ದರೆ ಅಮೆರಿಕದಲ್ಲಿ ರಾತ್ರಿ ಆಗಿತ್ತು. ಪ್ರಸ್ತುತ ಅಮೆರಿಕದ ಅಟ್ಲಾಂಟಾದಲ್ಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ರಾತ್ರಿ ಕಾದು ಕುಳಿತು, ತೀರ್ಪನ್ನು ಆಲಿಸಿದರು. “ದೀರ್ಘಕಾಲೀನವಾದ ಪ್ರಕರಣ ಸುಖಾಂತ್ಯಗೊಂಡಿರುವುದು ಸಂತಸ ತಂದಿದೆ. ಇದು ಲೋಕಕಲ್ಯಾಣಕ್ಕೆ ಕಾರಣವಾಗಲಿ’ ಎಂದು ಅವರು ಹಾರೈಸಿದ್ದಾರೆ.