ಮಗನೇ ಸಾಯ್ಸ್ ಬಿಡ್ತೀನಿ ಅಂದಿದ್ದರು:ಆಪ್ತ ಮಿತ್ರನ ನೆನೆದ ರಜನಿ
Team Udayavani, Nov 25, 2018, 11:57 AM IST
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಗಲುವಿಕೆಯಿಂದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತೀವ್ರ ದುಃಖಿತರಾಗಿದ್ದು ನನ್ನ ಆಪ್ತ ಮಿತ್ರ ಮರೆಯಾಗಿದ್ದಾನೆ, ಇನ್ನು ಅಂತಹ ಮನುಷ್ಯ ಹುಟ್ಟುವುದು ಅಸಾಧ್ಯ ಎಂದಿದ್ದಾರೆ.
ನನಗೆ ಮನಸು ಭಾರವಾಗಿದೆ. ನಾನು ಬೆಂಗಳೂರಿಗೆ ಯಾವಾಗ ಬಂದರೂ
ಅಂಬರೀಶ್ ಮನೆಗೆ ಊಟಕ್ಕೆ ಹೋಗುತ್ತಿದ್ದೆ. ಮೊನ್ನೆ ಅಣ್ಣನ ಮೊಮ್ಮಗನ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದೆ ಆದರೆ ಅಂಬಿ ಮನೆಗೆ ಹೊಗಲಿಕ್ಕೆ ಆಗಲಿಲ್ಲ.
ನಾನು ಹೋಗದ್ದಕ್ಕೆ ಸಿಟ್ಟಾದ ಆತ ಫೋನ್ ಮಾಡಿ ಬೈದ . ಮಗನೇ ಸಾಯ್ಸ್ ಬಿಡ್ತೀನಿ ಅಂದಿದ್ದ, ಅಷ್ಟೊಂದು ಆಪ್ತ ಮಿತ್ರ ಆತ. ಅಂಬರೀಶ್ಗೆ ನೂರಿಂದ ಇನ್ನೂರು ಜನ ಆಪ್ತ ಗೆಳೆಯರೇ ಇದ್ದಾರೆ ಎಂದರು.
ಅಂಬರೀಶ್ ಅವರಂತಹ ನಟ ಬರಬಹುದು ಆದರೆ ಅಂಬರೀಶ್ ತರ ಮನುಷ್ಯ ಬರಲು ಸಾಧ್ಯವಿಲ್ಲ ಎಂದರು.
ದೇವರು ದುಃಖ ಭರಿಸುವ ಶಕ್ತಿ ಕೊಡಬೇಕು. ಬದುಕಿದ್ದ ವರೆಗೆ ರಾಜನ ತರಹ ಬದುಕಿದ್ದರು ಅವರು ಎಂದು ತೀವ್ರ ಕಂಬನಿ ಮಿಡಿದರು.