ಕರಾವಳಿಯಲ್ಲಿ ರೆಡ್ ಆಲರ್ಟ್
Team Udayavani, Aug 15, 2019, 3:00 AM IST
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರ ಈ ಭಾಗದಲ್ಲಿ ಭಾರೀ ಮಳೆ ಯಾಗುವ ಮುನ್ಸೂಚನೆ ನೀಡಿರುವ ಹವಾ ಮಾನ ಇಲಾಖೆ, ರೆಡ್ ಆಲರ್ಟ್ ಘೋಷಿ ಸಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಗೋಕರ್ಣದಲ್ಲಿ ರಾಜ್ಯದಲ್ಲಿಯೇ ಅಧಿಕ ವೆನಿಸಿದ 14 ಸೆಂ. ಮೀ.ಮಳೆ ಸುರಿಯಿತು.
ಮಂಗಳೂರಿನ ನಂತೂರು ಜಂಕ್ಷನ್ ಬಳಿ ಮಳೆ, ಗಾಳಿಯಿಂದಾಗಿ ಬುಧವಾರ ಬೆಳಗ್ಗೆ ಮರವೊಂದು ಶಾಲಾ ಬಸ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲ 17 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ರಾ.ಹೆ. 66ರ ಅಂಚಿನಲ್ಲಿದ್ದ ಮರ ಬೆಳಗ್ಗೆ 8.50ರ ವೇಳೆಗೆ ಉರುಳಿತು.
ಶಾಲಾ ಬಸ್ ಮಾತ್ರವಲ್ಲದೆ ಒಂದು ಟ್ಯಾಂಕರ್ ಮತ್ತು ಪಿಕಪ್ ವಾಹನ ಮರದಡಿ ಸಿಲುಕಿಕೊಂಡು ಜಖಂ ಗೊಂಡಿವೆ. ಇದರಿಂದಾಗಿ 2 ಗಂಟೆ ಕಾಲ ಈ ಪ್ರದೇಶದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿ ಆಗಮಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.