ನಿಮ್ಮಲ್ಲೂ ಗೂಂಡಾಗಳಿಲ್ಲವೆ: ಸಿಎಂಗೆ ರೇಣು ಹಾಕಿದ ಸವಾಲೇನು ಗೊತ್ತೆ?
Team Udayavani, Sep 15, 2018, 12:24 PM IST
ಬೆಂಗಳೂರು:ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ನಾನಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಿಂಗ್ಪಿನ್ಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಗಂಭೀರ ಆರೋಪಕ್ಕೆ ಬಿಜೆಪಿ ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ತಿರುಗೇಟು ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯವರು ನಾಲಿಗೆ ಮೇಲೆ ಹಿಡಿತ ಹೊಂದಲಿ. ಅವರ ಸುತ್ತಮುತ್ತಾ ಇರುವವರು ಗೂಂಡಾಗಳು. ಇಸ್ಪಿಟ್ ದಂಧೆ ನಡೆಸುವವರು, ಗಣಿ ಮಾಫಿಯಾದವರು ಇದ್ದಾರೆ. ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದವರಿಗೆ ಟಿಕೆಟ್ ನೀಡಿದ್ದು ಯಾಕೆ? ಕ್ರಿಮಿನಲ್ಗಳಿಗೆ ಟಿಕೆಟ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದು, ಹಣ ಬಲದಿಂದ ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎನ್ನುತ್ತಿದೆ. ನಾನು ಸವಾಲು ಹಾಕುತ್ತೇನೆ, 10 ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುತ್ತಿರಲ್ಲಾ , ಒಂದು ಹೆಸರು ಬಹಿರಂಗ ಪಡಿಸಿ ಎಂದರು.
ಇದೇ ವೇಳೆ ಅವರೇ ಕಚ್ಚಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ.ಯಡಿಯೂರಪ್ಪ ಅವರ ವಿರುದ್ಧ ಹಗುರವಾದ ಮಾತು ಆಡುವುದು ಸರಿಯಲ್ಲ ಎಂದರು.