ಅಕಾಲಿಕ ಮಳೆಯಿಂದ ರಾಗಿಗೆ ಕೀಟ ಬಾಧೆ
Team Udayavani, Oct 11, 2017, 9:56 AM IST
ಬೆಂಗಳೂರು: ಅಕಾಲಿಕ ಮಳೆಯಿಂದ ರಾಗಿ ಬೆಳೆ ಈಗ ಕೀಟ ಬಾಧೆಗೆ ತುತ್ತಾಗಿದ್ದು, ಸುಮಾರು 15ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ರಾಗಿ ಬೆಳೆ ಹಾನಿಯ ಭೀತಿ ರೈತರನ್ನು ಕಾಡುತ್ತಿದೆ.
ರಾಗಿ ಬೆಳೆಗೆ ಕಾಡುತ್ತಿರುವ ಕೀಟ ಬಾಧೆಯನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಅಧ್ಯಯನ ನಡೆಸಿದೆ. ರಾಗಿ ಬೆಳೆಯನ್ನೇ ನಿರ್ಮೂಲನೆ ಮಾಡುವ ಅಪಾಯಕಾರಿ ಕೀಟ ನಾಶಪಡಿಸುವ ಬಗ್ಗೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಕುಂದನ, ದೇವನಹಳ್ಳಿ, ನೆಲಮಂಗಲ, ತುಮಕೂರು, ಗುಬ್ಬಿ ಸೇರಿ ವಿವಿಧ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಹಸಿರು ಗೇನು ಹುಳು, ಸುರುಳಿ ಹುಳು, ಸೈನಿಕ ಹುಳು ಬಾಧೆ ಕಂಡುಬಂದಿದೆ. ಒಂದು ರಾತ್ರಿಯಲ್ಲಿ ಸುಮಾರು ಅರ್ಧ ಎಕರೆಯಷ್ಟು ಬೆಳೆಯನ್ನು ಹಾನಿ ಮಾಡುವಷ್ಟು ರಕ್ಕಸ ಗುಣ ಹೊಂದಿರುವ ಹಸಿರು ಗೇನು ಹುಳು ಮತ್ತು ಸೈನಿಕ ಹುಳು ಕಾಟಕ್ಕೆ ಒಳಗಾದ ಬೆಳೆ ರೈತನ ಕೈಸೇರುವುದು ಬೊಗಸೆಯಷ್ಟು ಮಾತ್ರ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು
ಸೇರಿ ಹಲವೆಡೆ ರಾಗಿ ಪ್ರಮುಖ ಆಹಾರ ಬೆಳೆಯಾಗಿರುವುದರಿಂದ ರೈತರಲ್ಲಿ ಕೀಟ ಬಾಧೆ ಆತಂಕ ಸೃಷ್ಟಿಸಿದೆ.
ರೈತರು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಹಾನಿಯ ಪ್ರಮಾಣ ಅಧಿಕವಾಗಲಿದೆ ಎಂದು ಅಖೀಲ ಭಾರತ ಸುಸಂಘಟಿತ ಕಿರುಧಾನ್ಯ ಸಂಶೋಧನಾ ಪ್ರಾಯೋಜನೆ (ಎಐಸಿಆರ್ಪಿ) ಕೀಟ ತಜ್ಞರು ಎಚ್ಚರಿಸಿದ್ದಾರೆ.
ಕೀಟ ಬಾಧೆಗೆ ಕಾರಣ: ಪ್ರತಿ ವರ್ಷ ಜುಲೈ ಮೊದಲ ಅಥವಾ ಕೊನೆಯಲ್ಲಿ ರಾಗಿ ಬಿತ್ತನೆ ನಡೆಯುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಆಗಸ್ಟ್ ಮೊದಲ ವಾರದಲ್ಲಿ ಬಿತ್ತನೆ ಮಾಡಲಾಗಿದೆ. ಪತಂಗಗಳು ವಂಶಾಭಿವೃದ್ಧಿ ಮಾಡುವ ಸಮಯವೂ ಇದಾಗಿದ್ದು, ತಡವಾಗಿ ಬಿತ್ತನೆ ಮಾಡಿದ್ದರಿಂದ ಜಾಸ್ತಿ ಪ್ರಮಾಣದಲ್ಲಿ ಹುಳುಗಳ ಕಾಟ ಬಾಧಿಸುತ್ತಿದೆ. ಜತೆಗೆ ಅಕಾಲಿಕ ಮಳೆಯ ಪ್ರಮಾಣವೂ ಜಾಸ್ತಿಯಾಗಿದ್ದು, ಬೆಳೆಗೆ ನಿಗದಿತ ಅವಧಿಯಲ್ಲಿ ಔಷಧಿ ಸಿಂಪಡಣೆ ಮಾಡದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹುಳು ಬಾಧೆ ಉಂಟಾಗಿದೆ ಎಂದು ಕೀಟ ತಜ್ಞ ಪ್ರಭು ಸಿ.ಗಾಣಿಗೆರ್ ಮಾಹಿತಿ ನೀಡಿದ್ದಾರೆ.
ಹತೋಟಿಗೇನು ಕ್ರಮ?
ಕ್ಲೋರ್ಫೈರಿಫಾಸ್ ಅಥವಾ ಕ್ವಿನಾಲ್ಫಾಸ್ 2 ಮಿಲಿಯಷ್ಟು ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಪತಂಗಗಳು ದೀಪಕ್ಕೆ ಆಕರ್ಷಿತವಾಗುವ ಗುಣ ಹೊಂದಿದ್ದು, ರೈತರು ಸಾಮೂಹಿಕವಾಗಿ ಹೊಲದಲ್ಲಿ ಬೆಂಕಿ ಹಾಕಿ ಅಥವಾ ಪೆಟ್ರೂ-ಮ್ಯಾಕ್ಸ್ ದೀಪಗಳನ್ನು ಸಂಜೆ 7ರಿಂದ 9 ಗಂಟೆವರೆಗೆ ಇಟ್ಟು ಪತಂಗಗಳನ್ನು ನಾಶಪಡಿಸಬೇಕು. ಬೆಳೆದ ಹುಳು ಹತೋಟಿಗೆ 10 ಕೆ.ಜಿ. ಗೋಧಿ ಅಥವಾ ಅಕ್ಕಿ ತೌಡಿಗೆ 1 ಕೆ.ಜಿ. ಬೆಲ್ಲಕ್ಕೆ ಬೇಕಾಗುವಷ್ಟು ನೀರು ಬೆರೆಸಿಟ್ಟು, ಮಾರನೇ ದಿನ 100 ಮಿ.ಲೀ. ಕ್ವೀನಾಲ್ಫಾಸ್ ಕೀಟನಾಶಕ ಮಿಶ್ರಣ ಮಾಡಿ ಸಂಜೆ 5ಕ್ಕೆ ಹೊಲದಲ್ಲಿ ಚೆಲ್ಲಿ ಬೆಳೆದ ದೊಡ್ಡ ಹುಳುಗಳನ್ನು ಆಕರ್ಷಿಸಿ ನಾಶ ಪಡಿಸಬೇಕು.
ರಾಗಿ ಬೆಳೆಗೆ ಆಗಿರುವ ಕೀಟ ಬಾಧೆ ಕುರಿತು ಕೀಟ ತಜ್ಞರು, ಕೃಷಿ ವಿಜ್ಞಾನಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ವರದಿ ತಯಾರಿಸಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ರೈತರು ಕೂಡಲೇ ಔಷಧಿ ಸಿಂಪಡಣೆಗೆ ಮುಂದಾಗಿ ಬೆಳೆ ಹಾನಿ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕಿದೆ.
-ಪ್ರಭು ಸಿ.ಗಾಣಿಗೆರ್, ಕೀಟತಜ್ಞ, ಎಐಸಿಆರ್ ಪಿ
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ