ನದಿ ಮೂಲ, ಋಷಿ ಮೂಲ, ”ಡ್ಯಾಶ್” ಮೂಲ ಕೆದಕಲು ಹೋಗಬಾರದು: ಸಿ.ಟಿ.ರವಿ
ಸಾವರ್ಕರ್ ಗೆ ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶ ಸಿಕ್ಕಿರಲಿಲ್ಲ
Team Udayavani, Aug 29, 2022, 2:55 PM IST
ಬೆಂಗಳೂರು : ”ನದಿ ಮೂಲ, ಋಷಿ ಮೂಲ, ಡ್ಯಾಶ್ ಮೂಲ ಕೆದಕಲು ಹೋಗಬಾರದು ಎಂಬ ಹಳೆಯ ಗಾದೆ ಮಾತಿದೆ ಅದರ ಹಾಗೆ ಮುರುಘಾ ಶ್ರೀಗಳ ಮೇಲಿನ ಆರೋಪದ ಕುರಿತು ನಾನು ಹೆಚ್ಚೇನೂ ಮಾತನಾಡಲು ಹೋಗುವುದಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ತನಿಖೆಗೆ ಮೊದಲೇ ಅಪರಾಧದ ಹಣೆ ಪಟ್ಟಿ ಕಟ್ಟಲು ಬರುವುದಿಲ್ಲ, ನಿರಪರಾಧಿ ಎಂದು ಹೇಳಲೂ ಆಗುವುದಿಲ್ಲ. ಸ್ವಾಮೀಜಿ ಮೂರು ದಶಕಗಳಿಂದ ದುರ್ಬಲ ವರ್ಗದವರ ಸೇವೆ ಮಾಡುತ್ತಾ ಬಂದಿದ್ದಾರೆ. ಆಳಿ ನಿಂದ ಹಿಡಿದು ಅರಸನವರೆಗೆ ಎಲ್ಲರಿಗೂ ಈ ನೆಲದ ಕಾನೂನು ಒಂದೇ, ಈ ವಿಷಯದಲ್ಲಿ ನಾವು ಯಾವುದೇ ಹೇಳಿಕೆ ಕೊಟ್ಟರೂ ತಪ್ಪು ಅರ್ಥ ಬರುತ್ತದೆ. ನಾನು ಹೆಚ್ಚೇನೂ ಹೇಳುವುದಿಲ್ಲ” ಎಂದರು.
ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಮಬಂಧಿಸಿ ಪ್ರತಿಕ್ರಿಯಿಸಿ,”ನನ್ನಂತಹ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿಯೇ ಸರಕಾರ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ” ಎಂದರು.
”ಹಿಂದೆ ಕೋರ್ಟ್ ನಮಾಜ್ ಮಾಡಲು ಅವಕಾಶ ಕೊಟ್ಟಾಗ ಸಂಭ್ರಮಿಸಿದವರು ಈಗ ಗಣೇಶೋತ್ಸವ ಮಾಡಲು ಅವಕಾಶ ಮಾಡಿ ಕೊಟ್ಟಿರುವುದನ್ನೂ ಸ್ವೀಕರಿಸಬೇಕಲ್ಲವೇ. ಇನ್ನೊಬ್ಬರ ಸಂಭ್ರಮವನ್ನು ಸ್ವೀಕರಿಸುವುದು ನಿಜಾರ್ಥದಲ್ಲಿ ಧರ್ಮ ಅಲ್ಲವೇ” ಎಂದರು.
ಮನೋವಿಜ್ಞಾನ ಭಾವನೆ
8 ನೇ ತರಗತಿಯ ಪುಸ್ತಕದಲ್ಲಿ ಸಾವರ್ಕರ್ ಅವರ ಪಾಠದಲ್ಲಿ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿ ಬರುತ್ತಿದ್ದರು ಎನ್ನುವ ಬಹುಚರ್ಚಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಮನೋವಿಜ್ಞಾನ ಅಂತ ಒಂದಿದೆ. ಒಬ್ಬ ಜೈಲಿನಲ್ಲಿದ್ದ ರಾಜಕೀಯ ಕೈದಿ ತಾನು ನೇರವಾಗಿ ತನ್ನ ದೇಶಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಭಾವನೆಯನ್ನು ದೇಶದ ಒಳಗಿನ ಸಂಬಂಧವನ್ನು ಅಲ್ಲಿ ವ್ಯಕ್ತಪಡಿಸಲಾಗಿದೆ. ನಾವು ಇಲ್ಲಿದ್ದರೂ ಮನಸ್ಸಿನ ಮೂಲಕ, ಭಾವನೆಗಳ ಮೂಲಕ ವಿಹರಿಸಿ ಬರಬಹುದು. ತಾಂತ್ರಿಕವಾಗಿ, ವಿಪರೀತ ಅರ್ಥದಲ್ಲಿ ನೋಡಲು ಹೋಗಬೇಡಿ” ಎಂದರು.
”ಕೆಲವರು ಭಾರತದಲ್ಲೇ ಇದ್ದಾರೆ ಆದರೆ ಭಾರತೀಯತೆಯೇ ಇರುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ರಾಜಿ ಮಾಡಿಕೊಂಡಿದ್ದರೆ ಪುಸ್ತಕ ಬರೆಯಲು ಅವಕಾಶವೂ ಸಿಗುತ್ತಿತ್ತು. ಡಿಸ್ಕವರಿ ಆಫ್ ಇಂಡಿಯಾ ಬರೆಯಲು ಅವಕಾಶ ಸಿಗುತ್ತಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶವೂ ಸಿಗುತ್ತಿತ್ತು. ಆ ಅವಕಾಶ ಸಿಗಲಿಲ್ಲ” ಎಂದು ಪರೋಕ್ಷವಾಗಿ ಮಾರ್ಮಿಕ ಉತ್ತರದ ಮೂಲಕ ಕಾಂಗ್ರೆಸ್ ನತ್ತ ಆಕ್ರೋಶ ಹೊರ ಹಾಕಿದರು.
ನಾನು ಮೊದಲು ಮತ ಹಾಕಿದ್ದು ಜನತಾ ಪಕ್ಷಕ್ಕೆ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಜಯಂತಿ ಯಂದು ಅವರನ್ನು ಸ್ಮರಿಸಿದರು. ಅವರ ಹೆಸರಿನಲ್ಲೇ ಚುನಾವಣೆ ನಡೆದಿತ್ತು. 85 ರಲ್ಲಿ ಮೊದಲ ಬಾರಿಗೆ ಮತ ಹಾಕಲು ಅವಕಾಶ ಸಿಕ್ಕಾಗ ನಾನು ಜನತಾ ಪಕ್ಷಕ್ಕೆ ಮತ ಹಾಕಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್