ಸಿದ್ದರಾಮಯ್ಯ ಮಾಂಸ ಸೇವನೆ ವಿಚಾರ ಪ್ರಸ್ತಾಪಕ್ಕೆ ಚೀಟಿ ಕೊಟ್ಟು ನಿಲ್ಲಿಸಿದ ಸುರ್ಜೇವಾಲಾ
ಎದ್ದೇಳು ಮಂಜುನಾಥಾ' ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? : ಕಾಂಗ್ರೆಸ್ ವ್ಯಂಗ್ಯ
Team Udayavani, Aug 29, 2022, 2:58 PM IST
ಬೆಂಗಳೂರು:ಮಾಂಸ ಸೇವನೆಯ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚೀಟಿ ಕೊಟ್ಟು ನಿಲ್ಲಿಸಿದ ಘಟನೆ ನಡೆದಿದೆ.
ಜಂಟಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ತಕ್ಷಣವೇ ಅಲರ್ಟ್ ಆದ ಡಿ.ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ವಿಷಯದ ಹಾದಿ ತಪ್ಪಲಿದೆ ಎಂಬ ಆತಂಕದಿಂದ ಎಚ್ಚರಿಕೆ ಸಂದೇಶ ರವಾನಿಸಿದರು.
ಇದನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಸುರ್ಜೇವಾಲಾ ಮುಖ ನೋಡಿದ ಡಿಕೆಶಿ, ತಕ್ಷಣವೇ ಸನ್ನೆ ಮಾಡಿದರು. ಆಗ ಚೀಟಿ ಬರೆದು ಸಿದ್ದರಾಮಯ್ಯಗೆ ನೀಡಿದರು. ಚೀಟಿ ನೋಡಿ ಮಾಂಸಾಹಾರ ಸೇವನೆ ವಿಚಾರವನ್ನ ನಿಲ್ಲಿಸಿ ಭಾಷಣ ಮುಗಿಸಿದರು.
‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? : ಕಾಂಗ್ರೆಸ್ ವ್ಯಂಗ್ಯ
ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ತಮ್ಮ ಮನೆ ನೀರಿನಲ್ಲಿ ಮುಳುಗಿರುವ ಬಗ್ಗೆ ಜಗ್ಗೇಶ್ ಮಾಡಿದ ಟ್ವೀಟ್ ನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ರಾಜ್ಯಸಭಾ ಸಂಸದರು ಪ್ರವಾಹದಿಂದ ತಮಗೆ ಆಗುತ್ತಿರುವ ತೊಂದರೆ ಬಗೆಹರಿಸಿ ಎಂದು ಮನವಿ ಸಲ್ಲಿಸುತ್ತಾರೆ ಎಂದರೆ ಈ 40% ಸರ್ಕಾರದ ಪ್ರವಾಹದ ನಿರ್ವಹಣೆ ಹೇಗಿದೆ ಎಂಬುದು ಅರಿವಾಗುತ್ತದೆ.ಸಂಸದರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ? ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರಕಾರದ ಕಾಲೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ