ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ.. ನನಗೇ ಇನ್ನೇನು ಬೇಕು : ಶಾಮನೂರು
Team Udayavani, Jul 21, 2021, 4:54 PM IST
ಬೆಂಗಳೂರು : ನಮ್ಮ ಸ್ಟಾಂಡ್ ಈಗಲೂ ಅದೇ ಇದೆ. ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು.. ಸಾಕಲ್ಲ ಜೀವನ ಮಾಡೋಕೆ ಎಂದು ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಪಕ್ಷ ಕಟ್ಟಿದವರು. ಈ ಸಂದರ್ಭದಲ್ಲಿ ಅವರು ಬದಲಾವಣೆ ಮಾಡಿದ್ರೆ ಕಷ್ಟ. ಅವರ ದುರಾದೃಷ್ಟ ಅವರೇ ಅನುಭವಿಸ್ತಾರೆ. ನಮಗೆ ಲಿಂಗಾಯತ ಸಮುದಾಯವನ್ನು ಸೆಳೆಯೋ ಪ್ರಯತ್ನವಿಲ್ಲ ಎಂದರು.
ಈ ಹಿಂದೆ ಬಿಜೆಪಿ ಆರೋಪ ಮಾಡಿದ್ದು, ಲಿಂಗಾಯತರನ್ನು ಸೆಳೆಯಲು ಶಾಮನೂರು ಶಿವಶಂಕರಪ್ಪ ಪ್ಲಾನ್ ಮಾಡುತ್ತಿದ್ದಾರೆ ಎಂದಿದ್ದರು. ಈ ಮಾತಿಗೆ ಮಾರ್ಮಿಕವಾಗಿ ನುಡಿದಿರುವ ಶಾಮನೂರು ನನ್ನ ಬಳಿ ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು ಎಂದಿದ್ದಾರೆ.