ಚರ್ಚ್ ಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ : ಶೋಭಾ
Team Udayavani, May 19, 2021, 2:28 PM IST
ಚಿಕ್ಕಮಗಳೂರು : ಮೂಡಿಗೆರೆ, ಆಲ್ದೂರಿನ ಕೆಲ ಚರ್ಚ್ ಗಳಲ್ಲಿ ವ್ಯಾಕ್ಸಿನ್ ತಗೋಬೇಡಿ ಅಂತ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರು, ಏಕೆ ಹೀಗೆ ಹೇಳ್ತಿದ್ದಾರೆ ಎಂಬುದನ್ನ ಪತ್ತೆ ಮಾಡಬೇಕು. ಅವರು ವ್ಯಾಕ್ಸಿನ್ ತೆಗೆದುಕೊಳ್ತಾರೆ ಬೇರೆಯವರಿಗೆ ಬೇಡ ಅಂತಾರೆ.
ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಅದರಲ್ಲೇ ಬೇರೆ ಚರ್ಚ್ ಇರಬಹುದು. ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಈ ರೀತಿ ಇತ್ತೀಚೆಗೆ ಬಂದ ಚರ್ಚ್ಗಳಿಂದ ಅಪಪ್ರಚಾರ ನಡೆಯುತ್ತಿದೆ. ಅವರ ಬಗ್ಗೆ ತನಿಕೆ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಸಂಸದೆ ಶೋಭಾ ಹೇಳೀದ್ದಾರೆ.