ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ
Team Udayavani, Oct 24, 2021, 7:13 PM IST
ವಿಜಯಪುರ : ಕುರಿ ಉಣ್ಣೆ ಕಂಬಳಿ ಹೊದ್ದುಕೊಳ್ಳಲು ಅರ್ಹತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದು, ಅವರು ಎಂದಾದರೂ ಕುರಿ ಕಾಯ್ದಿದ್ದಾರೆಯೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ಸಿಂದಗಿ ವಿಧಾನಸಭೆ ಉಪ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ವಾಗ್ದಾಳಿ ನಡೆಸಿದರು. ಆದರೆ ನಿಜವಾದ ಕುರಿಗಾರ ನಾನು, ನಾನು ಕುರಿ ಕಾಯ್ದಿದ್ದೇನೆ ಎಂದು ಕಂಬಳಿ ಹೊದಿಯಲು ಅರ್ಹತೆ ಬೇಕು ಎಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.