“ಸಿದ್ದರಾಮಯ್ಯ ನಿಜವಾದ ಅನರ್ಹರು’
Team Udayavani, Nov 25, 2019, 3:00 AM IST
ಹೊಸಪೇಟೆ: ಸಿದ್ದರಾಮಯ್ಯ ದುರಹಂಕಾರಿ. ಯಾವಾಗಲೂ ಪೆಟ್ರೋಲ್ ಹಾಗೂ ಮ್ಯಾಚ್ಬಾಕ್ಸ್ನ್ನು ಕೈಯಲ್ಲಿ ಹಿಡಿದು ಕೊಂಡೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15 ಶಾಸಕರು ಅನರ್ಹರಾಗಿಲ್ಲ. ಅವರಿಗೆ ಸರ್ಟಿಫಿಕೇಟ್ ಕೊಡುವುದಕ್ಕೆ ಸಿದ್ದರಾಮಯ್ಯ ಯಾರು? ನಿಜವಾಗಿಯೂ ಸಿದ್ದರಾಮಯ್ಯ ಅವರೇ ಅನರ್ಹರು ಎಂದರು.