ಜಿಎಸ್‌ಟಿ ರಿಟರ್ನ್ ಸಲ್ಲಿಕೆಗೆ ಸಾಫ್ಟ್ವೇರ್‌ ಸಿದ್ಧವಿಲ್ಲ!


Team Udayavani, Aug 14, 2017, 11:25 AM IST

14-STATE-17.jpg

ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ಜುಲೈ ತಿಂಗಳ ಖರೀದಿ -ಮಾರಾಟ ವಿವರ (ರಿಟರ್ನ್) ಸಲ್ಲಿಸಲು ಏಳು ದಿನವಷ್ಟೇ ಬಾಕಿ ಉಳಿದಿದ್ದರೂ ರಿಟರ್ನ್ ಸಲ್ಲಿಸಲು ಪೂರಕವಾದ ಸಾಫ್ಟ್ವೇರ್‌ ಇನ್ನೂ ಸಿದ್ಧವಾಗದ ಹಿನ್ನೆಲೆಯಲ್ಲಿ ಸರ್ಕಾರ ಸೆ.5ರವರೆಗೆ ಅವಧಿ ವಿಸ್ತರಿಸಿದೆ.

ಜುಲೈ ತಿಂಗಳ ರಿಟರ್ನ್ ವಿವರವನ್ನು ಆ.20 ರೊಳಗೆ ಸಲ್ಲಿಸಬೇಕು. ಅದಕ್ಕಾಗಿ ವ್ಯಾಪಾರ ಸ್ಥರು ಎಲ್ಲ ದಾಖಲೆ ಕಾಗದ ಪತ್ರಗಳನ್ನು ಸಿದ್ಧಪಡಿಸಿ ಕೊಂಡಿಟ್ಟುಕೊಂಡಿದ್ದರು. ಆದರೆ ಸಲ್ಲಿಕೆಗೆ ಪೂರಕವಾದ ಸಾಫ್ಟ್ವೇರ್‌ ಇನ್ನೂ ಸಿದ್ಧವಾಗಿಲ್ಲ. ಇದರಿಂದ ವ್ಯಾಪಾರ- ವಹಿವಾಟುದಾರರು
ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರ ಮೇಲಿನ ಒತ್ತಡ ನಿವಾರಣೆಗೆ ರಿಟರ್ನ್ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್‌ 5ರವರೆಗೆ ವಿಸ್ತರಿಸಲಾಗಿದೆ. ಆದರೂ ಕೊನೇ ಕ್ಷಣದ ದಟ್ಟಣೆ ನಿವಾರಣೆಗೆ ರಿಟರ್ನ್ ಸಲ್ಲಿಸಲು ವಿವರ, ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರೂ ಸಾಫ್ಟ್ ವೇರ್‌ ಅಂತಿಮಗೊಳ್ಳದ ಕಾರಣ ಸಲ್ಲಿಸಲಾಗದೆ ಸಾಫ್ಟ್ವೇರ್‌ ನಿರೀಕ್ಷೆಯಲ್ಲಿ ವ್ಯಾಪಾರ- ವಹಿವಾಟು ದಾರರು ದಿನ ಕಳೆಯುವಂತಾಗಿದೆ.

ಸಿದ್ಧವಾಗದ ಸಾಫ್ಟ್ವೇರ್‌: ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಿದ್ದು, ಅದರಂತೆ ಜುಲೈ ತಿಂಗಳ ವಹಿವಾಟಿನ ವಿವರವನ್ನು ಆ.20ರೊಳಗೆ ಸಲ್ಲಿಸಬೇಕಿದೆ. ತಿಂಗಳಿನಾದ್ಯಂತ ನಡೆದ ಮಾರಾಟ- ಖರೀದಿಯ ಸಮಗ್ರ ವಿವರವನ್ನು ಆರ್‌-1ರಡಿ (ರಿಟರ್ನ್-1) ಸಲ್ಲಿಸುವುದು ಕಡ್ಡಾಯ. ಇದರಿಂದ ಸ್ವಯಂಪ್ರೇರಿತವಾಗಿ ಸಿದ್ಧವಾಗುವ “ರಿಟರ್ನ್-2′ ಅಡಿ ವಿವರಗಳನ್ನೂ ಹೊಂದಾಣಿಕೆ ಮಾಡಿ ದಾಖಲಿಸಬೇಕು. ಆದರೆ ಈವರೆಗೆ ಸಾಫ್ಟ್ ವೇರ್‌ ಸಿದ್ಧವಾಗದ ಕಾರಣ ತಾತ್ಕಾಲಿಕವಾಗಿ “ರಿಟರ್ನ್-3ಬಿ’ ಅಡಿ ವಿವರ ಸಲ್ಲಿಸಲು ಅವಕಾಶ ಮಾಸಿಕೊಡಲಾಗಿದೆ.

ಮೂಡದ ಸ್ಪಷ್ಟತೆ: ಜುಲೈ 1ರಿಂದ ಜಿಎಸ್‌ಟಿ ಜಾರಿಯಾದಾಗ ಜೂನ್‌ 30ರವರೆಗೆ ಇದ್ದ ದಾಸ್ತಾನಿಗೆ “ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌’ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಹಾಗಾಗಿ ಜುಲೈ 1ರಿಂದ ಪರಿಷ್ಕೃತ ದರದಂತೆ ಮಾರಾಟ ಮಾಡಿದರೂ ಕೇಂದ್ರ ಅಬಕಾರಿ ತೆರಿಗೆ ಮೊತ್ತವನ್ನು ಹಿಂತಿರುಗಿಸುವ ಭರವಸೆ ನೀಡಿತ್ತು. ಆದರೆ ಸದ್ಯ ರಿಟರ್ನ್ ಸಲ್ಲಿಸಲು ಬಿಡುಗಡೆ ಮಾಡಿರುವ “ರಿಟರ್ನ್ 3ಬಿ’ನಲ್ಲಿ ಹೂಡುವಳಿ ತೆರಿಗೆ ಮರು ಪಾವತಿ ಕುರಿತಾದ ಅಂಕಣವೇ ಕಾಣದಿರುವುದು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ವಾಣಿಜ್ಯ ಕಟ್ಟಡದಿಂದ ಬಾಡಿಗೆ ಪಡೆಯುತ್ತಿರು ವವರು ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿದ್ದರೆ ಅವರಿಗೆ ರಾಜಿ ತೆರಿಗೆಯ ಸೌಲಭ್ಯವನ್ನು ನಿರಾಕರಿಸುವುದು ಸರಿಯಲ್ಲ. ವಾಣಿಜ್ಯ ಕಟ್ಟಡದ ಬಾಡಿಗೆಗೆ ಸೂಕ್ತ ತೆರಿಗೆಯನ್ನು ಕಟ್ಟಡ ಮಾಲೀಕರಿಂದ ಪಡೆದು ಅವರು ನಡೆಸುವ ವ್ಯವಹಾರಕ್ಕೆ ರಾಜಿ ತೆರಿಗೆ ಸೌಲಭ್ಯ ಕಲ್ಪಿಸುವುದು ಸೂಕ್ತವೆನಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಜತೆಗೆ ವ್ಯಾಪಾರ- ವಹಿವಾಟುದಾರರು ರಿಟರ್ನ್ ಸಲ್ಲಿಸಲು ಸಿದ್ಧರಿದ್ದರೂ ಸಾಫ್ಟ್ವೇರ್‌ ಸಿದ್ಧವಾಗದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಾಫ್ಟ್ವೇರ್‌ಅನ್ನು ಬಳಕೆಗೆ ಮುಕ್ತಗೊಳಿಸಿ ಎಲ್ಲರೂ ಕಾಲಮಿತಿಯೊಳಗೆ ರಿಟರ್ನ್ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಆರ್ಥಿಕ ತಜ್ಞ ಜಿ.ಆರ್‌. ಮುರಳೀಧರ್‌ ತಿಳಿಸುತ್ತಾರೆ.

2 ಬಾರಿ ರಿಟರ್ನ್ ಸಲ್ಲಿಕೆ!
ಜುಲೈ ತಿಂಗಳ ವ್ಯಾಪಾರ- ವಹಿವಾಟಿನ ವಿವರ ದಾಖಲಿಸಲು ಸಾಫ್ಟ್ವೇರ್‌ ಸಿದ್ಧವಾಗದ ಕಾರಣ ಆರ್‌-3ಬಿ ಅಡಿ ಸಲ್ಲಿಸಲು  ಅವಕಾಶ ಕಲ್ಪಿಸಿದೆ. ಅದರಂತೆ ವ್ಯಾಪಾರ- ವಹಿವಾಟುದಾರರು ಜುಲೈ ಹಾಗೂ ಆಗಸ್ಟ್‌ ತಿಂಗಳ ವಿವರವನ್ನು ಆರ್‌-3ಬಿ ಅಡಿ ಸಲ್ಲಿಸಬೇಕು. ಸೆಪ್ಟೆಂಬರ್‌ನಿಂದ ಕಟ್ಟುನಿಟ್ಟಾಗಿ ತಿಂಗಳ 20ರೊಳಗೆ ನೇರವಾಗಿ ಆರ್‌-1 ಅಡಿ ವಿವರ ಸಲ್ಲಿಸುವ ವ್ಯವಸ್ಥೆ ಬರಲಿದೆ. ಆಗ ಜುಲೈ, ಆಗಸ್ಟ್‌ ತಿಂಗಳ ರಿಟರ್ನ್ ಸಲ್ಲಿಸಿದ್ದರೂ ಆರ್‌
-1ರಡಿ ಮತ್ತೂಮ್ಮೆ ವಿವರ ದಾಖಲಿಸುವುದು ಅನಿವಾರ್ಯವಾಗಲಿದೆ. ಹಾಗಾಗಿ ಎರಡು ಬಾರಿ ರಿಟರ್ನ್ ಸಲ್ಲಿಸಿದಂತಾಗಲಿದೆ.

ಜುಲೈನಲ್ಲಿ ಜಿಎಸ್‌ಟಿಯಡಿ ನಡೆದ ವ್ಯವಹಾರದ ವಿವರ ಸಲ್ಲಿಸಲು ಪೂರಕವಾದ ಸಾಫ್ಟ್ವೇರ್‌ ಸಿದ್ಧವಾಗುತ್ತಿದ್ದು, ರಿಟರ್ನ್ ಸಲ್ಲಿಕೆ ಅವಧಿಯನ್ನು ಸೆ.5ರವರೆಗೆ ಅವಧಿ ವಿಸ್ತರಿಸಲಾಗಿದೆ. ಜತೆಗೆ ಜುಲೈ, ಆಗಸ್ಟ್‌ ವಿವರವನ್ನು “ಆರ್‌-3ಬಿ’ಅಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್‌ ಬಳಿಕ ಕಾಲಮಿತಿಯೊಳಗೆ ಕಡ್ಡಾಯವಾಗಿ ರಿಟರ್ನ್ ಸಲ್ಲಿಸಬೇಕಾಗಲಿದೆ.  ಸಾಫ್ಟ್ವೇರ್‌ ಸಿದ್ಧವಾಗದಿರುವ ಬಗ್ಗೆ ವ್ಯಾಪಾರ- ವಹಿವಾಟುದಾರರು ಆತಂಕಪಡುವ ಅಗತ್ಯವಿಲ್ಲ.
ಬಿ.ಟಿ.ಮನೋಹರ್‌, ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ

ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.