SSLC: ಸುಮಂತ್,ಪೂರ್ಣಾನಂದ ಮತ್ತು ಪಲ್ಲವಿಗೆ 625ರಲ್ಲಿ 625 !
Team Udayavani, May 12, 2017, 3:37 PM IST
ಬೆಂಗಳೂರು : ಶುಕ್ರವಾರ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಮೂವರು ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದ ಸಾಧನೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಿಶೋರ್ ಕೇಂದ್ರ ದ ವಿದ್ಯಾರ್ಥಿ ಸುಮಂತ್ ಹೆಗ್ಡೆ ,ಪುತ್ತೂರಿನ ಕಡಬದ ಸೈಂಟ್ ಜೋಕಿಮ್ ಶಾಲೆಯ ಪೂರ್ಣಾನಂದ ಮತ್ತು ಬಾಗಲಕೋಟೆಯ ಜಮಖಂಡಿಯ ಎಸ್ಆರ್ಎಸಿ ಜೂನಿಯರ್ ಕಾಲೇಜಿನ ಪಲ್ಲವಿ ಅವರು ಈ ಸಾಧನೆ ಮಾಡಿದವರಾಗಿದ್ದಾರೆ.
624 ಅಂಕ ಪಡೆದವರು
ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಜಯನಿ ಆರ್ ನಾಥ್, ಹಾಸನದ ಯುನೈಟೆಡ್ ಹೈಸ್ಕೂಲಿನ ವಚನ್ ರಾಘವೇಂದ್ರ ಎನ್,ಯಲ್ಲಾಪುರದ ಮಂಚಿಕೇರಿಯ ರಾಜೇಶ್ವರಿ ಇಂಗ್ಲೀಷ್ ಶಾಲೆಯ ಹೇಮಂತ್ ಶಾಸ್ತ್ರೀ,ಕುಮಟಾ ಹೇರ್ವಟ್ಟಾದ ನಿರ್ಮಲಾ ಕಾನ್ವೆಂಟ್ ಸ್ಕೂಲ್ನ ನಂದಿನಿ ಎಮ್ ನಾಯ್ಕ, ಕುಮಟಾದ ಮೂರೂರಿನ ಪ್ರಗತಿ ಇಂಗ್ಲೀಷ್ ಮಿಡಿಯಂ ಶಾಲೆಯ ಈಶ್ವರ್ ಜೋಷಿ ಮತ್ತು ಕಲಬುರಗಿಯ ಚಂದ್ರಕಾಂತ್ ಪಾಟೀಲ್ ಇಂಗ್ಲೀಷ್ ಮಿಡಿಯಂ ಶಾಲೆಯ ಸೋನಾಲಿ ಬಿರಾದರ್ ಅವರು 624 ಅಂಕಗಳನ್ನು ಪಡೆದುಕೊಂಡ ಸಾಧನೆ ಮಾಡಿದ್ದಾರೆ.