ಸುಮಲತಾ ಗೆಲುವು: ಅಂಬಿ ಅಭಿಮಾನಿಯಿಂದ ಬಾಡೂಟ
Team Udayavani, May 25, 2019, 3:00 AM IST
ಶಿವಮೊಗ್ಗ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿ ಸಿದ್ದಕ್ಕೆ ಅಂಬರೀಶ್ ಅಭಿಮಾನಿಯೊಬ್ಬರು ಬಾಡೂಟ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ನಗರದ ಜೆ.ಎಚ್. ಪಟೇಲ್ ಬಡಾವಣೆಯ ಹನುಮಂತಪ್ಪ, ಅಂಬರೀಶ್ ಅಭಿಮಾನಿ.
15 ವರ್ಷದಿಂದ ಅಂಬರೀಶ್ ಹುಟ್ಟುಹಬ್ಬ ಆಚರಿಸಿ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದ ಹನುಮಂತಪ್ಪ, ಈಗ ಸುಮಲತಾ ಗೆದ್ದಿದ್ದಕ್ಕೆ, ಎರಡು ಕುರಿ ಕಡಿಸಿ, ನೆಂಟರಿಷ್ಟರಿಗೆಲ್ಲ ಬಾಡೂಟ ಹಾಕಿಸಿದ್ದಾರೆ. ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಶ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ನಡೆಸಿದ್ದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳನ್ನೂ ಫ್ಲೆಕ್ಸ್ನಲ್ಲಿ ಹಾಕಿಸಿದ್ದಾರೆ. 300 ರಿಂದ 350 ಮಂದಿ ಆಗಮಿಸಿ ಊಟ ಮಾಡಿದ್ದಾರೆ. ಸುಮಲತಾ ಅವರಿಗೆ ಸರ್ಕಾರದವರು ಬಹಳ ಕಾಟ ಕೊಟ್ಟಿದ್ದರು. ಆದರೂ ಅವರು ಗೆದ್ದಿದ್ದಾರೆ. ಅದೇ ಖುಷಿಗೆ ಎಲ್ಲರಿಗೂ ಊಟ ಹಾಕಿಸಿದೇªನೆ ಎನ್ನುತ್ತಾರೆ ಹನುಮಂತಪ್ಪ.