ಟ್ಯಾಂಕರ್ ಟಿಟಿಗೆ ಢಿಕ್ಕಿ :ತಿರುಪತಿಯಿಂದ ಮರಳುತ್ತಿದ್ದ ಮೂವರ ಸಾವು
Team Udayavani, Mar 19, 2017, 11:49 AM IST
ಚಿತ್ತೂರು (ಆಂಧ್ರ ): ಇಲ್ಲಿನ ಲಕ್ಷ್ಮಯ್ಯ ಖಂಡ್ರಿಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ ತಿರುಪತಿ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದ ತುಮಕೂರಿನ ಮೂವರು ದಾರುಣವಾಗಿ ಸಾವನ್ನಪ್ಪಿ , 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಟಿಟಿ ಚಾಲಕ ವಿಶಾಲ್ ಬಾಬು(35), ಕಾಮಾಕ್ಷಿ(27) ಮತ್ತು 2 ವರ್ಷದ ಮಗು ರಿದಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಬಂಗಾರಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.