ಪಠ್ಯ ಪರಿಷ್ಕರಣೆ : ಸಿಎಂಗೆ ವರದಿ ಸಲ್ಲಿಸಿದ ಶಿಕ್ಷಣ ಸಚಿವ
Team Udayavani, Jun 1, 2022, 12:29 PM IST
ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿ ಶಿಕ್ಷಣ ಸಚಿವರ ಕಚೇರಿಯಿಂದ ಸಿಎಂ ಬೊಮ್ಮಾಯಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಗುಜರಾತ್ ನಲ್ಲಿ ನಡೆಯುತ್ತಿರುವ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುವುದಕ್ಕೆ ಮುನ್ನ ಈ ವರದಿಯನ್ನು ಸಿಎಂ ಕಚೇರಿಗೆ ಕಳುಹಿಸಲಾಗಿದೆ. ಬೊಮ್ಮಾಯಿ ಅವರು ಬೆಂಗಳೂರಿಗೆ ವಾಪಾಸ್ ಆದ ಬಳಿಕ ಈ ವರದಿಯತ್ತ ಚಿತ್ತ ಹರಿಸಲಿದ್ದಾರೆ.
ಇದನ್ನೂ ಓದಿ:ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆಯೇ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ
ಭಗತ್ ಸಿಂಗ್, ನಾರಾಯಣಗುರು ಕುರಿತಾದ ವಿವಾದಗಳಿಗೆ ಈ ವರದಿಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಜತೆಗೆ ಕುವೆಂಪು ವಿಚಾರದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಅನೇಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ.
ಪರಿಷ್ಕರಣೆ :
ಇದರ ಜತೆಗೆ ಪಿಯುಸಿ ದ್ವಿತೀಯ ವರ್ಷದ ಸಮಾಜ ವಿಜ್ಞಾನದ ಒಂದು ಪಾಠವನ್ನೂ ಬದಲಾಯಿಸಲಾಗಿದೆ. ಒಂದು ಸಮುದಾಯದ ಭಾವನೆಗೆ ಧಕ್ಕೆ ಪಡಿಸುವಂತಿದ್ದ ಹೊಸಧರ್ಮಗಳ ಉದಯ ಪಾಠದ ಆಕ್ಷೇಪಾರ್ಹ ವಿಚಾರವನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.