ಸೈನೈಡ್ ಸೇವನೆಯಿಂದಲೇ ಮಹಿಳೆ ಸಾವು: ಪ್ರಬಲ ದಾಖಲೆ ಕೇಳಿದ ಕೋರ್ಟ್
Team Udayavani, Oct 11, 2017, 10:09 AM IST
ಬೆಂಗಳೂರು: ಸೈನೈಡ್ ಮೋಹನನಿಂದ ಕೊಲೆಯಾಗಿದ್ದಾಳೆ ಎನ್ನಲಾದ ಅನಿತಾ ಬರಮಾರ್ ಸಾವಿಗೆ ಸೈನೈಡ್ ಅಥವಾ ಪಾಸ್ಪರಸ್ (ಕ್ರಿಮಿನಾಶಕ) ಸೇವನೆ ಕಾರಣವೇ ಎಂಬುದನ್ನು ದಾಖಲಾತಿಗಳೊಂದಿಗೆ ಸ್ಪಷ್ಟಪಡಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಮಂಗಳವಾರ ಹೈಕೋರ್ಟ್ ಸೂಚಿಸಿದೆ.
2009ರಲ್ಲಿ ನಡೆದ ಅನಿತಾ ಬರಮಾರ್ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿತು.
ಮಂಗಳವಾರದ ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು,ಅನಿತಾ ಬರಮಾರ್ ಕೊಲೆ ಪ್ರಕರಣ ಸಂಬಂಧ ಆರೋಪಿ ಸೈನೈಡ್ ಮೋಹನನ ಹೇಳಿಕೆ, ಎಫ್ಐಆರ್, ದೋಷಾರೋಪ ಪಟ್ಟಿ ಸಲ್ಲಿಸಿ ವಾದಮಂಡಿಸಿದರು. ಆರೋಪಿ ಸೈನೈಡ್ ಮೋಹನ 20 ಮಹಿಳೆಯರನ್ನು ಸೈನೈಡ್ ಕೊಟ್ಟು ಕೊಲೆಗೈದಿದ್ದಾನೆ. ಅನಿತಾ ಬರಮಾರ್ ಅವರನ್ನು ಅದೇ ರೀತಿ ಕೊಂದಿದ್ದಾನೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಹೀಗಾಗಿ ಅಧೀನ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ಕಾಯಂಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.
ಅನಿತಾ ಬರಮಾರ್ ಮರಣೋತ್ತರ ಪರೀಕ್ಷೆ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಮಹಿಳೆಯ ಶವಪರೀಕ್ಷೆ ವರದಿಯಲ್ಲಿ ಪಾಸ್ಪರಸ್ ಸೇವನೆಯಿಂದಲೂ ಸಾವು ಸಂಭವಿಸಿದೆ ಎಂದು ಉಲ್ಲೇಖವಾಗಿದೆ. ಆರೋಪಿಯೂ ತಾನು ಸೈನೈಡ್ ನೀಡಿಲ್ಲ ಎಂದು ಆಕ್ಷೇಪಿಸಿದ್ದಾನೆ. ಆದರೆ ಪ್ರಾಸಿಕ್ಯೂಶನ್, ಸೈನೈಡ್ ಸೇವನೆಯಿಂದ ಸಾವು ಸಂಭವಿಸಿದೆ ಎಂದು ವಾದಿಸುತ್ತಿದ್ದೀರಿ. ಹೀಗಾಗಿ
ಕೊಲೆಯಾದ ಮಹಿಳೆಯ ಶವಪರೀಕ್ಷೆ ವರದಿ ನೀಡಿದ ವೈದ್ಯರ ಬಳಿ ಹೇಳಿಕೆ ಕೊಡಿಸಿ. ಇಲ್ಲವೇ ಮಹಿಳೆ ಸೈನೈಡ್ ಸೇವನೆಯಿಂದ ಮೃತಪಟ್ಟಿದ್ದಾಳೆ ಎಂಬುದಕ್ಕೆ ಪ್ರಬಲ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಮಂಗಳವಾರದ ವಿಚಾರಣೆ ವೇಳೆಯೂ ಕನ್ನಡದಲ್ಲಿಯೇ ವಾದ ಮಂಡಿಸಿದ ಆರೋಪಿ ಸೈನೈಡ್ ಮೋಹನ್, ತಾನು ಸೈನೈಡ್ ನೀಡಿ ಕೊಲೆ ಮಾಡಿಲ್ಲ. ತನ್ನ ವಿರುದ್ಧದ ಆರೋಪಗಳು ನಿರಾಧಾರ ಎಂದು ನ್ಯಾಯಪೀಠಕ್ಕೆ ತಿಳಿಸಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ