Elections; ಲೋಕ ಚುನಾವಣೆಗೆ ಸಜ್ಜು ರಾಜ್ಯ ಬಿಜೆಪಿ ತಂಡ ಸಿದ್ಧ
ವಿಜಯೇಂದ್ರರಿಗೆ ಹಿರಿಯರ ಬಲ; ಸೋತವರಿಗೆ ಸಂಘಟನೆ ಹೊಣೆ
Team Udayavani, Dec 24, 2023, 6:30 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡ ಒಂದೂಕಾಲು ತಿಂಗಳ ಅನಂತರ ಪಕ್ಷದ ಪದಾಧಿಕಾರಿಗಳ ಬದಲಾವಣೆಯೂ ಆಗಿದೆ. ಅದರಲ್ಲಿ ಹಿರಿಯ ರಿಗಿಂತ ಹೆಚ್ಚು ಯುವಕರಿಗೆ ಆದ್ಯತೆ ಕೊಡಲಾಗಿದೆ.
ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ವಿಜಯೇಂದ್ರ ಪದಾಧಿಕಾರಿಗಳ ಪಟ್ಟಿ ಯನ್ನು ಅಂತಿಮಗೊಳಿಸಿಕೊಂಡು ಬರು ವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ಪಕ್ಷ ಸಂಘಟನೆಯೆಡೆಗೆ ಗಮನ ಕೊಟ್ಟಿರುವ ಅವರು ತಮ್ಮ ತಂಡವನ್ನು ಬಲಪಡಿಸಿಕೊಂಡಿದ್ದಾರೆ.
ಒಟ್ಟು 32 ಮಂದಿಗೆ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ಜತೆಗೆ ವಿವಿಧ ಮೋರ್ಚಾಗಳ ಅಧ್ಯಕ್ಷರೂ ಬದಲಾಗಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕಿದ್ದು, ಹೊಸ ತಂಡದೊಂದಿಗೆ ಜೆಡಿಎಸ್ನೂ° ಜತೆಗಿಟ್ಟುಕೊಂಡು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಆ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸಬೇಕೆಂಬ ಕರೆಯನ್ನೂ ವಿಜಯೇಂದ್ರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಿದ್ದು ಹಿರಿಯರು, ಹಳಬರಿಗೆ ಬಹುಪಾಲು ಕೊಕ್ ನೀಡಲಾಗಿದೆ.
ಸೋತವರಿಗೆ ಅವಕಾಶ
ಹತ್ತು ಮಂದಿ ಉಪಾಧ್ಯಕ್ಷರ ಪೈಕಿ ಶಾಸಕರಾಗಿ ಗೆದ್ದಿರುವ ಭೈರತಿ ಬಸವರಾಜ್ ಬಿಟ್ಟು ಸೋತ ಬಹುತೇಕರಿಗೆ ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನೂ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಪೈಕಿ ಮಾಜಿ ಸಚಿವ ಸುನಿಲ್ ಕುಮಾರ್ ಬಿಟ್ಟು ಉಳಿದಂತೆ ಪರಾಭವಗೊಂಡವರಿಗೆ ಸ್ಥಾನ ಸಿಕ್ಕಿದೆ. ಚುನಾವಣೆಗೆ ಸ್ಪರ್ಧಿಸದ ಕೆಲವರಿಗೂ ಅವಕಾಶ ದೊರೆತಿದ್ದು, ಹಿರಿಯ ರಾಜಕಾರಣಿಗಳ ಮಕ್ಕಳಿಗೂ ಸ್ಥಾನಮಾನ ಸಿಕ್ಕಿದೆ.
ರಾಜ್ಯ ಉಪಾಧ್ಯಕ್ಷರು
ಮುರುಗೇಶ್ ನಿರಾಣಿ – ಬಾಗಲಕೋಟೆ, ಭೈರತಿ ಬಸವರಾಜ್-ಬೆಂಗಳೂರು, ರಾಜುಗೌಡ ನಾಯಕ್-ಯಾದಗಿರಿ, ಎನ್. ಮಹೇಶ್, ಚಾಮರಾಜನಗರ, ಅನಿಲ್ ಬೆನಕೆ-ಬೆಳಗಾವಿ, ಹರತಾಳು ಹಾಲಪ್ಪ-ಶಿವಮೊಗ್ಗ, ರೂಪಾಲಿ ಸಂತೋಷ್ ನಾಯಕ್-ಉತ್ತರ ಕನ್ನಡ, ಡಾ| ಬಸವರಾಜ ಕೇಲಗಾರ – ಹಾವೇರಿ, ಮಾಳವಿಕಾ ಅವಿನಾಶ್-ಬೆಂಗಳೂರು, ಎಂ. ರಾಜೇಂದ್ರ – ಮೈಸೂರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ವಿ. ಸುನಿಲ್ ಕುಮಾರ್- ಉಡುಪಿ, ಪಿ. ರಾಜೀವ್ – ಬೆಳಗಾವಿ, ಎನ್. ಎಸ್. ನಂದೀಶ್ ರೆಡ್ಡಿ – ಬೆಂಗಳೂರು, ಜೆ. ಪ್ರೀತಮ್ ಗೌಡ – ಹಾಸನ.
ರಾಜ್ಯ ಕಾರ್ಯದರ್ಶಿಗಳು
ಶೈಲೇಂದ್ರ ಬೆಲ್ದಾಳೆ- ಬೀದರ್, ಡಿ. ಎಸ್. ಅರುಣ್- ಶಿವಮೊಗ್ಗ, ಬಸವರಾಜ ಮತ್ತೀಮೋಡ್ – ಕಲಬುರ್ಗಿ, ಸಿ. ಮುನಿರಾಜು – ಚಿಕ್ಕಬಳ್ಳಾಪುರ, ವಿನಯ್ ಬಿದರೆ – ತುಮಕೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ – ದಕ್ಷಿಣ ಕನ್ನಡ, ಶರಣು ತಳ್ಳಿಕೇರಿ – ಕೊಪ್ಪಳ, ಕು. ಲಲಿತಾ ಅನಾಪುರ – ಯಾದಗಿರಿ, ಡಾ. ಲಕ್ಷ್ಮೀ ಅಶ್ವಿನ್ ಗೌಡ – ಮಂಡ್ಯ, ಅಂಬಿಕಾ ಹುಲಿನಾಯ್ಕರ್ – ತುಮಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ