ಅಲ್ಲಿ ಯಾರಿಗೂ ಕನ್ನಡ ಗೊತ್ತಿರಲಿಲ್ಲ : ದೆಹಲಿಯಲ್ಲಾದ ಅನುಭವ ಬಿಚ್ಚಿಟ್ಟ ವೃಕ್ಷದೇವತೆ
Team Udayavani, Nov 9, 2021, 3:48 PM IST
ಅಂಕೋಲಾ : ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕ್ಷಣ ಎಲ್ಲರ ಹೃದಯಗಳಲ್ಲಿ ಚಿರ ಸ್ಥಾಯಿಯಾಗಿ ಉಳಿದಿದೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಎಂದಿನ ದಿರಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು.
ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ… ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು ಹೇಳಿದ್ದು ನನಗೆ ಗೊತ್ತಾಗುತ್ತಿರಲಿಲ್ಲ. ಸುಮ್ಮನೆ ಎಲ್ಲದಕ್ಕೂ ಹೂ.. ಹೂ.. ಎಂದು ತಲೆಯಲ್ಲಾಡಿಸುತ್ತಿದ್ದರು ಎಂದು ತುಳಿಸಿಗೌಡ ಹೇಳಿದರು.
ಅಲ್ಲಿ ಭಯಂಕರ ಜನ, ಬರೀ ಪ್ರಶಸ್ತಿ ಪಡೆದವರೇ ಇದ್ದರು ಬಾಕಿ ಜನ ಜಾಸ್ತಿ ಇರಲಿಲ್ಲ. ಅಲ್ಲಿ ಯಾರಿಗೂ ಕನ್ನಡ ಬರೋದಿಲ್ಲ… ಮೋದಿ ಹತ್ರಾನೂ ಮಾತನಾಡಿದೆ ಆದ್ರೆ ಅವರಿಗೂ ಕನ್ನಡ ಬರುವುದಿಲ್ಲ.. ಬರೀ ತಲೆಯಲ್ಲಾಡಿಸುತ್ತ ಹೂ ಹೂ ಎನ್ನುತ್ತಿದ್ರು ಎಂದು ವೃಕ್ಷ ಮಾತೆ ನಗು ನಗುತ್ತಲೇ ಹೇಳಿಕೊಂಡರು.
ನಾನು ಗಿಡ ನೆಡುತ್ತೇನೆ ಎಂದು ಹೇಳಿ ಪ್ರಶಸ್ತಿ ಪಡೆದೆ. ಅವರಿಗೆ ಕನ್ನಡ ಗೊತ್ತಾಗುತ್ತಿರಲಿಲ್ಲ ಬರೀ ಹಾ.. ಹಾ.. ಎನ್ನುತ್ತಿದ್ರು ಎಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆದ ಅನುಭವನ್ನು ತುಳಸಿ ಗೌಡ ನಗುತ್ತಲೇ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ