ಕೃಷಿ ಕಾಯ್ದೆಗಳು ರೈತರ ಪರವಾಗಿವೆ, ಕಾಂಗ್ರೆಸ್ ಅಪಪ್ರಚಾರಕ್ಕೆ ಹೆದರಲ್ಲ: ಸದಾನಂದ ಗೌಡ
Team Udayavani, Oct 2, 2020, 2:23 PM IST
ಬೆಂಗಳೂರು: ಎಪಿಎಂಸಿ ಹಾಗೂ ಕೃಷಿ ವಿಚಾರ ರಾಜ್ಯಕ್ಕೆ ಸೇರಿದ್ದರೂ ಕೇಂದ್ರ ನೆರವು ನೀಡಬಾರದೆಂದಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ಜು ರೈತರ ಹಿತದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ವಿಧೇಯಕ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ವಿಧೇಯಕ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ವಿಧೇಯಕಗಳು ರೈತಪರವಾಗಿವೆ. ಕಾಂಗ್ರೆಸ್ ನ ಅಪಪ್ರಚಾರಕ್ಕೆ ಹೆದರುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಮತ್ತೆ ಅಧ್ಯಾದೇಶ ಮಾರ್ಗ: ವಿವಾದಿತ ಮೂರು ಕೃಷಿ ಮಸೂದೆಗಳಿಗೆ ಅಧ್ಯಾದೇಶ ಬಲ
ಇದನ್ನೂ ಓದಿ:ದೇಶಿ ಉತ್ಪನ್ನಕ್ಕೆ ಒತ್ತು: ಮಾರ್ಚ್ ನಿಂದ ಆಟಿಕೆ ಸಾಮಾನು ಆಮದಿಗೆ ಲೈಸೆನ್ಸ್ ಅಗತ್ಯ?