Govt Bus ಮೇಲೆ ಕಲ್ಲು ತೂರಿದ ಮಹಿಳೆ; 5,000 ರೂ.ದಂಡ!
ಕೊಪ್ಪಳದಲ್ಲಿ ಘಟನೆ... ಗಂಟೆಗಟ್ಟಲೆ ಕಾದು ಕೋಪದ ಭರದಲ್ಲಿ....!
Team Udayavani, Jun 26, 2023, 1:04 PM IST
ಕೊಪ್ಪಳ: ನಿಗದಿತ ಬಸ್ ನಿಲ್ದಾಣದಲ್ಲಿ ನಿಲ್ಲಿಸದ ಸರಕಾರಿ ಬಸ್ ಮೇಲೆ ಕಲ್ಲು ಎಸೆದ ಮಹಿಳೆಯೊಬ್ಬರಿಗೆ 5,000 ರೂ.ದಂಡ ವಿಧಿಸಲಾಗಿದೆ.
ಲಕ್ಷ್ಮೀ ಎಂಬ ಮಹಿಳೆ ಕೊಪ್ಪಳ ಜಿಲ್ಲೆಯ ಹುಲಿಗಿಗೆ ತೆರಳಿ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.ಗಂಟೆಗಟ್ಟಲೆ ಕಾದರೂ ಲಿಂಗಾಪುರ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ನಿಲ್ಲಿಸಲಿಲ್ಲ ಎಂದು ಲಕ್ಷ್ಮೀ ಹೇಳಿಕೊಂಡಿದ್ದಾರೆ. ಕೋಪದ ಭರದಲ್ಲಿ ಕೊಪ್ಪಳ-ಹೊಸಪೇಟೆ ನಾನ್ ಸ್ಟಾಪ್ ಬಸ್ ಗೆ ಕಲ್ಲು ಎಸೆದಿದ್ದು, ಅದರ ಕಿಟಕಿಯೊಂದಕ್ಕೆ ಹಾನಿಯಾಗಿದೆ. ಬಸ್ ಚಾಲಕ ಬಸ್ ನಿಲ್ಲಿಸಿ ಲಕ್ಷ್ಮೀ ಅವರನ್ನು ಹತ್ತಿಸಿಕೊಂಡು ಮುನೀರ್ಬಾದ್ ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಕ್ಷಮೆಯಾಚಿಸಿ 5 ಸಾವಿರ ರೂ.ದಂಡ ಪಡೆದಿದ್ದಾರೆ. ಲಕ್ಷ್ಮೀ ಬಳಿಕ ಅದೇ ಬಸ್ನಲ್ಲಿ ತನ್ನ ಗ್ರಾಮವಾದ ಇಳಕಲ್ಗೆ ತೆರಳಿದ್ದಾರೆ. ದೂರು ದಾಖಲಿಸಿಕೊಂಡಿಲ್ಲ.
ಲಕ್ಷ್ಮೀ ಮತ್ತು ಆಕೆಯೊಂದಿಗೆ ಇದ್ದವರು ಇನ್ನೊಂದು ಬದಿಯಲ್ಲಿ ನಿಂತಿದ್ದರು, ಹಾಗಾಗಿ ಯಾವುದೇ ಬಸ್ ನಿಲ್ಲಿಸಿರಲಿಲ್ಲ. ಎಂದು ಬಸ್ ನ ಚಾಲಕ ಮತ್ತು ಕಂಡಕ್ಟರ್ ಮುಕ್ಕಣ್ಣ ಹೇಳಿದ್ದಾರೆ.ಅವರು ಇಳಕಲ್ಗೆ ಹೋಗಬೇಕಿತ್ತು, ನಾವು ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ, ಅವರು ರಸ್ತೆಯ ರಾಂಗ್ ಸೈಡ್ನಲ್ಲಿ ನಿಂತಿದ್ದರು ಮತ್ತು ಎದುರು ಬದಿಯ ಬಸ್ ನಿಲ್ದಾಣದಲ್ಲಿ ಕಾಯಬೇಕಿತ್ತು. ನಮ್ಮ ಬಸ್ ತಡೆರಹಿತ ಸೇವೆಯಾಗಿರುವುದರಿಂದ ನಾವು ದಾರಿಯುದ್ದಕ್ಕೂ ಯಾವುದೇ ನಿಲುಗಡೆ ಮಾಡುವುದಿಲ್ಲ, ಬಸ್ ಬರುತ್ತಿದ್ದಂತೆ ಅವರು ಬಸ್ಸಿಗೆ ಕಲ್ಲು ಎಸೆದರು” ಎಂದು ಮುಕ್ಕಣ್ಣ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ