ವಲಸಿಗರ ಕರೆದೊಯ್ಯಲು ಸಿದ್ಧ; ಯು.ಕೆ.ಸಚಿವೆ ಸುಯೆಲ್ಲಾ ಟೀಕೆಗೆ ಭಾರತದ ಹೈಕಮಿಷನ್‌ ತಿರುಗೇಟು

ಅವಧಿ ಮೀರಿ ವಾಸಿಸುತ್ತಿರುವವರಲ್ಲಿ ಭಾರತೀಯರೇ ಹೆಚ್ಚು: ಸುಯೆಲ್ಲಾ ಟೀಕೆ

Team Udayavani, Oct 8, 2022, 7:25 AM IST

ವಲಸಿಗರ ಕರೆದೊಯ್ಯಲು ಸಿದ್ಧ; ಯು.ಕೆ.ಸಚಿವೆ ಸುಯೆಲ್ಲಾ ಟೀಕೆಗೆ ಭಾರತದ ಹೈಕಮಿಷನ್‌ ತಿರುಗೇಟು

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವೀಸಾ ಅವಧಿ ಮುಕ್ತಾಯವಾಗಿ ವಾಸಿಸುತ್ತಿರುವವ ಸಂಖ್ಯೆಯಲ್ಲಿ ಭಾರತೀಯರೇ ಅಧಿಕ ಎಂಬ ಗೃಹ ಸಚಿವೆ ಸುಯೆಲ್ಲಾ ಬ್ರಾವರ್ಮನ್‌ ಹೇಳಿಕೆಗೆ ಲಂಡನ್‌ನಲ್ಲಿ ಇರುವ ಭಾರತೀಯ ಹೈಕಮಿಷನ್‌ ತಿರುಗೇಟು ನೀಡಿದೆ.

ವೀಸಾ ಅವಧಿ ಮುಗಿದಿರುವ ಭಾರತೀಯ ವಲಸಿಗರನ್ನು ವಾಪಸು ಭಾರತಕ್ಕೆ ಕರೆದೊಯ್ಯಲು ಬ್ರಿಟನ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಸಹಿ ಹಾಕಲಾಗಿದ್ದ ಮೈಗ್ರೇಷನ್‌ ಮತ್ತು ಮೊಬಿಲಿಟಿ ಪಾರ್ಟ್‌ನರ್‌ಶಿಪ್‌ (ಎಂಎಂಪಿ) ಒಪ್ಪಂದದ ಅನ್ವಯ ಅವಧಿ ಮೀರಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆ ಮಾಡಲು ಸಿದ್ಧ ಎಂದು ಹೈಕಮಿಷನ್‌ ಪ್ರತಿಪಾದಿಸಿದೆ. 2020ರಲ್ಲಿ ಒಟ್ಟು 20,706 ಭಾರತೀಯರು ವೀಸಾ ಅವಧಿ ಮುಗಿದ ನಂತರವೂ ವಾಸವಾಗಿದ್ದರು.

ಬ್ರಾವರ್‌ಮನ್‌ ಹೇಳಿಕೆ ಏನು?:
ಬ್ರಿಟನ್‌ನ “ಸ್ಪೆಕ್ಟೇಟರ್‌’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ವೀಸಾ ಅವಧಿ ಮುಗಿದು ಯು.ಕೆ.ಯಲ್ಲಿ ವಾಸಿಸುತ್ತಿರುವವರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚು ಎಂದು ಸುಯೆಲ್ಲಾ ಬ್ರಾವರ್ಮನ್‌ ದೂರಿದ್ದರು. “ಬ್ರಿಟನ್‌ ಮತ್ತು ಭಾರತ ನಡುವೆ ನಡೆಯುತ್ತಿರುವ ವ್ಯಾಪಾರಿ ಒಪ್ಪಂದದಲ್ಲಿ ಭಾರತೀಯ ವಲಸಿಗರನ್ನು ಹೆಚ್ಚಿಸುವ ಅಂಶವನ್ನೂ ಸೇರಿಸಿಕೊಂಡಿರುವುದು ನಮ್ಮ ಸರ್ಕಾರದ ಗುರಿಗೆ ವಿರುದ್ಧವಾಗಿದೆ’ ಎಂದಿದ್ದರು.

ವಲಸಿಗರು ಕಾರಣ:
ಲೀಸ್ಟರ್‌ನಲ್ಲಿ ಪಾಕ್‌-ಭಾರತ ಕ್ರಿಕೆಟ್‌ ಪಂದ್ಯಾವಳಿಯಿಂದಾಗಿ ನಡೆದ ಗಲಭೆಯ ವಿಚಾರದಲ್ಲಿ ಮಾತನಾಡಿದ್ದ ಅವರು, “ಅನಿಯಂತ್ರಿತ ವಲಸೆ ಹಾಗೂ ಹೊಸದಾಗಿ ದೇಶಕ್ಕೆ ವಲಸೆ ಬಂದವರು ಸರಿಯಾಗಿ ಹೊಂದುಕೊಳ್ಳದೇ ಹೋಗಿದ್ದರಿಂದಲೇ ಈ ಗಲಭೆ ಉಂಟಾಗಿದೆ’ ಎಂದು ಸುಯೆಲ್ಲಾ ಟೀಕಿಸಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.