ಬಗ್ಧಾದ್ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 32 ಮಂದಿ ಬಲಿ
Team Udayavani, Jan 2, 2017, 4:20 PM IST
ಬಗ್ಧಾದ್ : ಬಗ್ಧಾದ್ ನೆರೆಯ ನಗರದಲ್ಲಿಂದು ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದು ಕನಿಷ್ಠ 32 ಮಂದಿ ಮೃತಪಟ್ಟರಲ್ಲದೆ ಡಜನ್ಗಟ್ಟಲೆ ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು. ಸದ್ರ್ ನಗರದ ಹೊರವಲಯದಲ್ಲಿ ಇವರು ದಿನದ ಕೂಲಿಗಾಗಿ ಕಾಯುತ್ತಿದ್ದರು. ಬಗ್ಧಾದ್ನ ಈಶಾನ್ಯದಲ್ಲಿರುವ ಈ ನಗರವು ಶಿಯಾ ಬಾಹುಳ್ಯ ಹೊಂದಿದ್ದು ನಿರಂತರ ದಾಳಿಗೆ ಗುರಿಯಾಗಿದೆ.
ಪೊಲೀಸ್ ಕರ್ನಲ್ ಒಬ್ಬರ ಪ್ರಕಾರ ಈ ಆತ್ಮಾಹುತಿ ದಾಳಿಯಲ್ಲಿ 32 ಜನರು ಬಲಿಯಾಗಿದ್ದಾರೆ; 61 ಮಂದಿ ಗಾಯಗೊಂಡಿದ್ದಾರೆ. ಕಳೆದ ಶನಿವಾರವಷ್ಟೇ ಇಲ್ಲಿನ ಜನದಟ್ಟನೆಯ ಮಾರ್ಕೆಟ್ನಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ 27 ಮಂದಿ ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ