ಸಿಂಹದ ಮರಿ ಬಳಸಿ ಜೋಡಿಗಳ ಫೋಟೋ ಶೂಟ್ : ಭುಗಿಲೆದ್ದ ಆಕ್ರೋಶ
ಸಿಂಹದ ಮರಿಯೊಂದು ಮಲಗಿರುವ ದೃಶ್ಯ
Team Udayavani, Mar 13, 2021, 6:46 PM IST
ಲಾಹೋರ್: ಇತ್ತೀಚಿನ ದಿನಗಳಲ್ಲಿ ನವಜೋಡಿಗಳು ಪ್ರಾಣಿಗಳನ್ನು ತಮ್ಮ ಫೋಟೋ ಶೂಟ್ ಗಳಲ್ಲಿ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಲಾಹೋರ್ ನ ಜೋಡಿಯೊಂದು ಸಿಂಹದ ಮರಿಯೊಂದನ್ನು ಬಳಸಿಕೊಂಡು ಫೋಟೋ ಶೂಟ್ ಮಾಡಿಸಿದ್ದು, ಇದೀಗ ಈ ಪೋಟೋ ಶೂಟ್ ಪ್ರಾಣಿ ದಯಾ ಸಂಘವನ್ನು ಒಳಗೊಂಡಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಲಾಹೋರ್ ಪ್ರದೇಶದ ಜೋಡಿಯೊಂದು ಈ ರೀತಿಯ ವಿಚಿತ್ರ ಹುಚ್ಚು ಸಾಹಸವನ್ನು ಮಾಡಿದ್ದು, ಇದೀಗ ಈ ಪೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
ಈ ಪೋಟೋದಲ್ಲಿ ಸಿಂಹದ ಮರಿಯೊಂದು ಮಲಗಿರುವ ದೃಶ್ಯವಿದ್ದು, ಹಿಂಭಾಗದಲ್ಲಿ ಜೋಡಿಗಳು ಕುಳಿತಿರುವ ದೃಷ್ಯವನ್ನು ಸೆರೆಹಿಡಿಯಲಾಗಿದೆ. ಈ ಪೋಟೋ ಪೋಸ್ಟ್ ಆದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಾಣಿಗಳ ಕುರಿತು ಒಲವವನ್ನು ಹೊಂದಿರುವ ಹಲವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಘಟನೆಯ ಕುರಿತಾಗಿ ಪಾಕಿಸ್ತಾನ ಮೂಲದ ಸೇವ್ ದಿ ವರ್ಲ್ಡ್ ಸಂಸ್ಥೆ ಈ ಕುರಿತಾದ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಈ ಪೋಟೋಗಳನ್ನು ಲಾಹೋರ್ ನ ಸ್ಟುಡಿಯೋ ಒಂದರಲ್ಲಿ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ:ಟ್ರ್ಯಾಕ್ಟರ್ ಪಲ್ಟಿಯಾಗಿ 10 ಮಂದಿ ನರೇಗಾ ಕೂಲಿ ಕಾರ್ಮಿಕರಿಗೆ ಗಾಯ
ಈ ಫೋಟೋಗಳನ್ನು ತೆಗೆದ ಸ್ಟುಡಿಯೋ ಹೆಸರು ಅಫ್ಜಲ್ ಎಂದು ವರದಿಯಾಗಿದ್ದು, ಇದು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೊಬ್ಬರಿ 1,20,000 ಫಾಲೋವರ್ಸ್ ಗಳನ್ನು ಹೊಂದಿದೆ ಎನ್ನಲಾಗಿದೆ.
ಈ ನಡುವೆ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಹಲವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಬಳಿಕ ಫೋಟೋಗಳನ್ನು ಜಾಲತಾಣಗಳಿಂದ ತೆಗೆಯಲಾಗಿದೆ. ಆದರೆ ನೆಟ್ಟಿಗರು ಮಾತ್ರ ಈ ಪೋಟೋದ ಸ್ಕ್ರೀನ್ ಶಾಟ್ ಅನ್ನು ತೆಗೆದುಕೊಂಡು ಇನ್ನಷ್ಟು ವೈರಲ್ ಮಾಡಿದ್ದಾರೆ.
@PunjabWildlife does your permit allow for a lion cub to be rented out for ceremonies?Look at this poor cub sedated and being used as a prop.This studio is in Lahore where this cub is being kept.Rescue him please pic.twitter.com/fMcqZnoRMd
— save the wild (@wildpakistan)
ಸದ್ಯ ಈ ರೀತಿಯಲ್ಲಿ ಫೋಟೋ ತೆಗೆದ ಕಾರಣದಿಂದಾಗಿ ಪ್ರಾಣಿದಯಾ ಸಂಘಗಳು ಸ್ಟುಡಿಯೋದ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿವೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ