ಇಂಗಾಲದ ಡೈ ಆಕ್ಸೈಡ್ ನಿಂದ ರಾಕೆಟ್ ಇಂಧನ?
ಜಗತ್ತಿನ ಅತ್ಯಂತ ಸಿರಿವಂತ ಎಲಾನ್ ಮಸ್ಕ್ ಮಾಸ್ಟರ್ ಪ್ಲ್ಯಾನ್; ಜಾಗತಿಕ ತಾಪಮಾನ ಇಳಿಸುವಲ್ಲಿ ಸಹಾಯ
Team Udayavani, Dec 14, 2021, 10:00 PM IST
ಎಲಾನ್ ಮಸ್ಕ್.
ನ್ಯೂಯಾರ್ಕ್: ನಂಬಿದರೆ ನಂಬಿ, ಬಿಟ್ಟರೆ ಬಿಡಿ.. ನಮ್ಮ ಸುತ್ತ ಇರುವ ಗಾಳಿಯಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆದು, ರಾಕೆಟ್ ಇಂಧನವನ್ನಾಗಿ ಪರಿವರ್ತಿಸಲು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ ಮತ್ತು ಜಗತ್ತಿನ ಅತ್ಯಂತ ಸಿರಿವಂತ ಎಲಾನ್ ಮಸ್ಕ್ ಮುಂದಾಗಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟಿಸಿರುವ ಅವರು, ಈ ಯೋಜನೆಯಲ್ಲಿ ಆಸಕ್ತರು ಭಾಗಿಯಾಗಬಹುದು ಎಂದೂ ಹೇಳಿದ್ದಾರೆ. ಇವರ ಪ್ಲ್ಯಾನ್ ಹೀಗಿದೆ; ಸದ್ಯ ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆಯಿಂದ ತತ್ತರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್. ಒಮ್ಮೆ ಗಾಳಿಯಿಂದ ಇದನ್ನು ಹೊರತೆಗೆದರೆ, ಅದು ಶುದ್ಧವಾಗುತ್ತದೆ. ವಾತಾವರಣದಲ್ಲಿರುವ ಬಿಸಿಯೂ ಕಡಿಮೆಯಾಗುತ್ತದೆ.
ಮಂಗಳಯಾನಕ್ಕೂ ಸಹಕಾರಿ
ಪ್ರಸಕ್ತ ವರ್ಷ ಟೈಮ್ ಪತ್ರಿಕೆಯ ವರ್ಷದ ವ್ಯಕ್ತಿ ಎಂಬ ಗೌರವಕ್ಕೂ ಭಾಜನರಾಗಿರುವ ಎಲಾನ್ ಮಸ್ಕ್, ಇಂಥ ವಿಚಿತ್ರ ಯೋಜನೆಗಳಿಂದಲೇ ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಂತೂ ರಾಕೆಟ್ಗಳ ಮರುಬಳಕೆಯಲ್ಲಿ ಅತ್ಯಂತ ದೊಡ್ಡ ಸಾಧನೆ ಮಾಡಿದ್ದಾರೆ. ಒಂದು ವೇಳೆ ರಾಕೆಟ್ ಇಂಧನವನ್ನಾಗಿ ಇಂಗಾಲದ ಡೈ ಆಕ್ಸೈಡ್ ಬಳಕೆ ಮಾಡಿದರೆ, ಮಾನವ ಸಹಿತ ಮಂಗಳಯಾನಕ್ಕೂ ಸಹಕಾರಿಯಾಗಲಿದೆ ಎಂಬುದು ಅವರ ಚಿಂತನೆ. ಅಲ್ಲಿನ ಇಂಗಾಲವನ್ನೇ ಹೀರಿ ಇಂಧನವನ್ನಾಗಿ ಪರಿವರ್ತನೆ ಮಾಡಿದರೆ, ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡಲು ಅನುಕೂಲವಾಗುತ್ತದೆ.
ಇದನ್ನೂ ಓದಿ:ಲಖೀಂಪುರ ಹಿಂಸಾಚಾರ ಯೋಜಿತ ಸಂಚು: ಎಸ್ಐಟಿ
ಮಸ್ಕ್ ಚಿಂತನೆಗಳು
- ಡ್ರೈವರ್ ಲೆಸ್ ಕಾರು
- ಹೈಪರ್ಸಾನಿಕ್ ರೈಲು
- ಟ್ರಾಫಿಕ್ ದಟ್ಟಣೆ ನಿವಾರಣೆಗೆ ಕ್ಯೂಬ್ ಸಿಸ್ಟಮ್
- ರಾಕೆಟ್ ಮರುಬಳಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ