ಸಾಕ್ಷ್ಯ ಸಲ್ಲಿಸದಿದ್ದರೆ ಸಯೀದ್ ಬಿಡುಗಡೆ: ಲಾಹೋರ್ ಹೈಕೋರ್ಟ್
Team Udayavani, Oct 11, 2017, 6:49 PM IST
ಲಾಹೋರ್ : 2008ರ ಮುಂಬಯಿ ದಾಳಿಗಳ ಪ್ರಮುಖ ರೂವಾರಿಯಾಗಿರುವ ಹಫೀಜ್ ಸಯೀದ್ ವಿರುದ್ಧ ಸರಕಾರ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸದಿದ್ದರೆ ಆತನ ಗೃಹ ಬಂಧನವನ್ನು ಕೊನೆಗೊಳಿಸುವುದಾಗಿ ಪಾಕಿಸ್ಥಾನದ ನ್ಯಾಯಾಲಯವೊಂದು ಎಚ್ಚರಿಕೆ ನೀಡಿದೆ.
ಜಮಾತ್ ಉದ್ ದಾವಾ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ ಮತ್ತು ಆತನ ಇತರ ನಾಲ್ಕು ಸಹಚರರನ್ನು ಪಾಕ್ ಸರಕಾರ ಉಗ್ರ ನಿಗ್ರಹ ಕಾಯಿದೆಯಡಿ ಈ ವರ್ಷ ಜನವರಿಯಲ್ಲಿ ಗೃಹ ಬಂಧನದಲ್ಲಿ ಇರಿಸಿತ್ತು.
ಸಯೀದ್ ಬಂಧನದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಲಾಹೋರ್ ಹೈಕೋರ್ಟ್ ನಿನ್ನೆ ಮಂಗಳವಾರ ನಡೆಸಿತ್ತು. ಸಯೀದ್ ಗೃಹ ಬಂಧನ ಕುರಿತಾದ ದಾಖಲೆ ಪತ್ರ ಹಾಗೂ ಸಾಕ್ಷ್ಯಗಳನ್ನು ಕೋರ್ಟಿಗೆ ತರುವ ನಿರೀಕ್ಷೆಯಿದ್ದ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ ಆವಶ್ಯಕ ದಾಖಲೆ ಪತ್ರಗಳೊಂದಿಗೆ ಕೋರ್ಟಿಗೆ ಹಾಜರಾಗಲು ವಿಫಲರಾದರು ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳ ಕ್ಲಿಪ್ಪಿಂಗ್ ಆಧರಿಸಿಕೊಂಡು ಯಾವನೇ ವ್ಯಕ್ತಿಯನ್ನು ದೀರ್ಘಕಾಲ ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಒಳಾಡಳಿತ ಸಚಿವಾಲಯದ ಕಾರ್ಯದರ್ಶಿಯ ಗೈರು ಹಾಜರಿಯಿಂದ ಸಿಡಿಮಿಡಿಗೊಂಡ ನ್ಯಾಯಾಧೀಶ ಸಯ್ಯದ್ ಮುಜಾಹರ್ ಅಲಿ ಅಕ್ಬರ್ ನಖ್ವಿ ಹೇಳಿದರು. ಜನರ ಮೂಲಭೂತ ಹಕ್ಕನ್ನು ರಕ್ಷಿಸುವ ಬಾಧ್ಯತೆ ಸರಕಾರಕ್ಕೆ ಇದೆ ಎಂದವರು ಎಚ್ಚರಿಸಿದರು.
ಅಕ್ಟೋಬರ್ 13ರಂದು ಮತ್ತೆ ಸೂಕ್ತ ದಾಖಲೆ ಪತ್ರಗಳೊಂದಿಗೆ ಕೋರ್ಟಿಗೆ ಹಾಜರಾಗುವಂತೆ ನ್ಯಾಯಾಧೀಶರು ಒಳಾಡಳಿ ಕಾರ್ಯದರ್ಶಿಗೆ ಆದೇಶ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ