ದುಬೈನಲ್ಲಿ 14 ಕೋಟಿ ರೂ. ಗೆದ್ದ ಕೇರಳಿಗ
Team Udayavani, Oct 5, 2018, 7:35 AM IST
ದುಬೈ: ಯುಎಇನಲ್ಲಿರುವ ಕೇರಳದ ಮೊಹಮ್ಮದ್ ಕುಂಞಿ ಮಯ್ನಾಲ (42) ಎಂಬವರು 14 ಕೋಟಿ ರೂ. ನಗದು ಬಹುಮಾನ ಗೆದ್ದುಕೊಂಡಿದ್ದಾರೆ. ಪ್ರತಿ ತಿಂಗಳು ನಡೆಯುವ ಎತ್ತಿಸಲಾತ್ ರ್ಯಾಫಲ್ ಡ್ರಾದಲ್ಲಿ ಅವರು ಭಾಗವಹಿಸಿದ್ದರು. ಈ ಮೊತ್ತವನ್ನು ತಮ್ಮ ಆತ್ಮೀಯ ಬಂಧುವಿನ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. 15 ವರ್ಷಗಳಿಂದ ಅವರು ದುಬೈನ ವಾಣಿಜ್ಯ ಮಳಿಗೆಯ ಸೇಲ್ಸ್ಮ್ಯಾನ್ ಆಗಿದ್ದಾರೆ.