ಕಾಬೂಲ್ ಸಚಿವಾಲಯದ ಬಳಿ ಆತ್ಮಾಹುತಿ ದಾಳಿ; 20 ಕ್ಕೂ ಹೆಚ್ಚು ಸಾವು
ಚೀನದ ನಿಯೋಗ ಭೇಟಿಯಾಗಬೇಕಿದ್ದ ಸಚಿವಾಲಯ ಗುರಿಯಾಗಿರಿಸಿಕೊಂಡು ದಾಳಿ
Team Udayavani, Jan 11, 2023, 9:15 PM IST
ಕಾಬೂಲ್ : ಚೀನದ ನಿಯೋಗ ಬುಧವಾರ ಭೇಟಿಯಾಗಬೇಕಿದ್ದ ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.
2021 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ಸುಧಾರಿತ ಭದ್ರತೆಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ ಆದರೆ ಹಲವಾರು ಬಾಂಬ್ ಸ್ಫೋಟಗಳು ಮತ್ತು ದಾಳಿಗಳು ನಡೆದಿವೆ ಎಂದು ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ಸ್ಥಳೀಯ ಘಟಕವು ಹೇಳಿಕೊಂಡಿದೆ.
ಬುಧವಾರದ ಸ್ಫೋಟ ಸಂಭವಿಸಿದಾಗ ಎಎಫ್ಪಿ ತಂಡವೊಂದು ಪಕ್ಕದ ಮಾಹಿತಿ ಸಚಿವಾಲಯದೊಳಗೆ ಸಂದರ್ಶನ ನಡೆಸುತ್ತಿತ್ತು.ಹೊರಗೆ ಬೆನ್ನುಹೊರೆ ಮತ್ತು ರೈಫಲ್ ಅನ್ನು ತನ್ನ ಭುಜದ ಮೇಲೆ ತೂಗುಹಾಕಿಕೊಂಡು ಆ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದು ತಿಳಿದು ಬಂದಿದೆ.
ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ ಸ್ಫೋಟ ದುರದೃಷ್ಟವಶಾತ್ ಸಾವುನೋವುಗಳಿಗೆ ಕಾರಣವಾಯಿತು.ಭದ್ರತಾ ತಂಡಗಳು ಪ್ರದೇಶವನ್ನು ತಲುಪಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಚಿವಾಲಯದ ಎತ್ತರದ ಗೋಡೆಯ ಕಾಂಪೌಂಡ್ನ ಹೊರಗೆ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ವಿಡಿಯೋ ತೋರಿಸಿದ್ದು, ಕೆಲವು ಗಾಯಾಳುಗಳು ನೆಲದ ಮೇಲೆ ಒದ್ದಾಡುತ್ತಾ ಸಹಾಯಕ್ಕಾಗಿ ಕಿರುಚುತ್ತಿದ್ದರು ಮತ್ತು ಬೆರಳೆಣಿಕೆಯಷ್ಟು ಜನರು ಸಹಾಯ ಮಾಡಲು ಹರಸಾಹಸ ಪಟ್ಟಿರುವುದು ಕಂಡು ಬಂದಿದೆ.
“ಇಂದು ವಿದೇಶಾಂಗ ಸಚಿವಾಲಯದಲ್ಲಿ ಚೀನದ ನಿಯೋಗ ಇರಬೇಕಿತ್ತು, ಆದರೆ ಸ್ಫೋಟದ ಸಮಯದಲ್ಲಿ ಅವರು ಉಪಸ್ಥಿತರಿದ್ದರು ಎಂಬುದು ನಮಗೆ ತಿಳಿದಿಲ್ಲ” ಎಂದು ಮಾಹಿತಿ ಮತ್ತು ಸಂಸ್ಕೃತಿಯ ಉಪ ಸಚಿವ ಮುಹಾಜರ್ ಫರಾಹಿ ಎಎಫ್ಪಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?