ಕಾಬೂಲ್ ಬ್ಲಾಸ್ಟ್ :80 ಸಾವು; ಭಾರತೀಯ ದೂತಾವಾಸ ಸಿಬಂದಿ ಸುರಕ್ಷಿತ
Team Udayavani, May 31, 2017, 11:16 AM IST
ಕಾಬೂಲ್ : ಭಾರತೀಯ ದೂತಾವಾಸವೂ ಸೇರಿದಂತೆ ಹಲವಾರು ದೂತಾವಾಸಗಳು ಇರುವ ಕಾಬೂಲಿನ ಅತ್ಯಂತ ಗರಿಷ್ಠ ಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ ಇಂದು ಬುಧವಾರ ಪ್ರಬಲ ಕಾರ್ ಬಾಂಬ್ ನ್ಪೋಟ ಸಂಭವಿಸಿದ್ದು ಕನಿಷ್ಠ 80ಕ್ಕೂ ಅಧಿಕ ಜನರು ಮಡಿದಿರುವ ಅಥವಾ ಗಾಯಗೊಂಡಿರುವ ಶಂಕೆ ಇದೆ.
ಭಾರತೀಯ ದೂತಾವಾಸದ ಸಿಬಂದಿಗಳೆಲ್ಲರೂ ಸುರಕ್ಷಿತರಾಗಿರುವರೆಂದು ತಿಳಿದುಬಂದಿದೆ.
ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದೊಡನೆಯೇ ಭಾರೀ ಪ್ರಮಾಣದ ದಟ್ಟನೆಯ ಕಪ್ಪು ಹೊಗೆ ರಾಜತಾಂತ್ರಿಕ ಪ್ರದೇಶವನ್ನು ಆವರಿಸಿಕೊಂಡು ಗಗನದಲ್ಲಿ ಅತೀ ಎತ್ತರದ ವರೆಗೂ ಅದು ಚಾಚಿಕೊಂಡಿತ್ತು; ಸ್ಫೋಟದಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಇಲ್ಲವೇ ಮಡಿದಿದ್ದಾರೆ ಎಂದು ಒಳಾಡಳಿತ ಸಚಿವಾಲಯ ತಿಳಿಸಿದೆ.
ಸ್ಫೋಟದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಮತ್ತು ಇವರಲ್ಲಿ ಹೆಚ್ಚಿನವರು ಪೌರರೇ ಆಗಿದ್ದಾರೆ; ಗಾಯಾಳುಗಳನ್ನು ಕಾಬೂಲಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ; ಮಡಿದವರು ಎಷ್ಟು ಎಂಬ ಬಗ್ಗೆ ನಮಗೆ ನಿಖರವಾಗಿ ತಿಳಿದಿಲ್ಲ ಎಂದು ಆರೋಗ್ಯ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಆರು ದಿನಗಳ ಯುರೋಪ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಷಯದ ಬಗ್ಗೆ ತಾಜಾ ಮಾಹಿತಿಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್ ಪೊಲೀಸ್ ವಕ್ತಾರ ಬಶೀರ್ ಮುಜಾಹಿದ್ ಅವರ ಪ್ರಕಾರ ಹಲವಾರು ಮಂದಿ ಸ್ಫೋಟದಲ್ಲಿ ಗಾಯಗೊಂಡಿದ್ದು ಅನೇಕರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ