ಡೋನಲ್ಡ್‌ ಟ್ರಂಪ್‌ ಗೆ ಅಮೆರಿಕ ಮಾಧ್ಯಮದ ಖಡಕ್‌ ಬಹಿರಂಗ ಪತ್ರ


Team Udayavani, Jan 19, 2017, 5:30 PM IST

Trump-700.jpg

ವಾಷಿಂಗ್ಟನ್‌ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಲ್ಡ್‌ ಟ್ರಂಪ್‌ ಮತ್ತು ಅಮೆರಿಕನ್‌ ಮಾಧ್ಯಮ ನಡುವಿನ ಸಂಬಂಧಗಳು ಈಗಾಗಲೇ ಹಳಸಲು ಆರಂಭಿಸಿದೆ. ಟ್ರಂಪ್‌ ಮಾಧ್ಯಮ ವಿಚಾರದಲ್ಲಿ ಪ್ರಭಾವ ಬೀರಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳನ್ನು ಎಚ್ಚರಿಕೆಯಿಂದ ಕಂಡುಕೊಳ್ಳಲಾಗಿದೆ.

ಅಂತೆಯೇ ಅಮೆರಿಕನ್‌ ಪ್ರಸ್‌ ಕಾರ್ಪೊರೇಶನ್‌ ಮತ್ತು ಶ್ವೇತ ಭವನ ಪತ್ರಕರ್ತರು ಟ್ರಂಪ್‌ ಗೆ ಖಡಕ್‌ ಬಹಿರಂಗ ಬರೆದಿದ್ದಾರೆ. ಈ ಪತ್ರದಲ್ಲಿ  ಪತ್ರಕರ್ತರು ಟ್ರಂಪ್‌ ಗೆ “ನಮ್ಮ ವರದಿಗಾರಿಕೆಯ ನಿಯಮಗಳನ್ನು ನಾವು ರೂಪಿಸುತ್ತೇವೆ; ನೀವಲ್ಲ; ನಮ್ಮ ಓದುಗರಿಗೆ, ವೀಕ್ಷಕರಿಗೆ ಏನನ್ನು ಕೊಡಬೇಕು ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ; ನೀವಲ್ಲ’ ಎಂದು ಖಡಕ್‌ ಆಗಿ ಎಚ್ಚರಿಕೆ ನೀಡಿದ್ದಾರೆ. 

ಅಮೆರಿಕದ ಪತ್ರಕರ್ತರು ಟ್ರಂಪ್‌ ಗೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಬರೆದಿರುವ ಈ ಖಡಕ್‌ ಬಹಿರಂಗ ಪತ್ರವನ್ನು ಕೊಲಂಬಯಾ ಜರ್ನಲಿಸಂ ರಿವ್ಯೂ ನಿಯತಕಾಲಿಕ ಪ್ರಕಟಿಸಿದೆ. ಕೊಲಂಬಿಯ ವಿಶ್ವವಿದ್ಯಾಲಯವು ವೃತ್ತಿಪರ ಪತ್ರಕರ್ತರಿಗಾಗಿ ಈ ನಿಯತಕಾಲಿಕವನ್ನು ಪ್ರಟಿಸುತ್ತಿದೆ.

ನಿಯೋಜಿತ ಅಧ್ಯಕ್ಷರು (ಟ್ರಂಪ್‌) ಮತ್ತು ಅಮೆರಿಕನ್‌ ಪ್ರಸ್‌ ಕಾರ್ಪೊರೇಶನ್‌ ನಡುವಿನ ಸಂಬಂಧ ಮಂದಿನ ನಾಲ್ಕು ವರ್ಷಗಳಲ್ಲಿ, ಅಥವಾ ಸಂಭವನೀಯ ಎಂಟು ವರ್ಷಗಳಲ್ಲಿ, ಚೆನ್ನಾಗಿ ಇರಲಾರದೆಂಬುದು ನಿಮಗೆ (ಟ್ರಂಪ್‌ ಗೆ) ಅಚ್ಚರಿಯ ವಿಷಯವಾಗೇನೂ ಇರಲಾರದೆಂದು ನಾವು ಭಾವಿಸುತ್ತೇವೆ’ ಎಂದು ಪತ್ರದಲ್ಲಿ  ಮುಲಾಜಿಲ್ಲದೆ ಹೇಳಲಾಗಿದೆ.

“ನೀವು (ಟ್ರಂಪ್‌) ನಿಮ್ಮ ಪ್ರಭಾವ ಬೀರಲು ಬಯಸುವ ಟಿವಿ ಪ್ರಸಾರ ಸಮಯ, ಪತ್ರಿಕೆಗಳಲ್ಲಿನ ಕಾಲಂ ಗಳು ನಮ್ಮವು; ನಮ್ಮ ವೀಕ್ಷಕರಿಗೆ, ಓದುಗರಿಗೆ ಯಾವುದೇ ಅಗತ್ಯ, ಯಾವುದು ಹಿತ ಎಂಬುದನ್ನು ತೀರ್ಮಾನಿಸುವವರು ನಾವು; ನೀವಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.

“ಚುನಾವಣಾ ಪ್ರಚಾರಾಭಿಯಾನದ ವೇಳೆಯೇ ನೀವು ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿದ್ದೀರಿ; ನಮಗೆ ಟಾಂಟ್‌ ನೀಡಲು ಟ್ವಿಟರ್‌ ಬಳಸಿಕೊಂಡಿದ್ದೀರಿ; ಹಾಗೆಯೇ ವೈಯಕ್ತಿಕವಾಗಿ ಪತ್ರಕರ್ತರಿಗೆ ಬೆದರಿಕೆ ಹಾಕಲು ನಿಮ್ಮ ಜನರನ್ನು ಉಪಯೋಗಿಸಿಕೊಂಡಿದ್ದೀರಿ; ನೀವೇ ಖುದ್ದು ಹಲವಾರು ಮಾನನಷ್ಟ ದಾವೆಗಳನ್ನು ಮಾಧ್ಯಮ ಸಂಸ್ಥೆ ಹಾಗೂ ಮಾಧ್ಯಮ ಮಂದಿಯ ವಿರುದ್ಧ ಹೂಡಿದ್ದೀರಿ; ಆದರೆ ಅದರಿಂದ ನಿಮಗೆ ಯಾವ ಲಾಭವೂ ಆಗಿಲ್ಲ. ಮಾಧ್ಯಮದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸುವ ನೀತಿ ನಿಮಯಗಳನ್ನು ರೂಪಿಸುವ ಹಕ್ಕು, ಅಧಿಕಾರ ನಿಮಗಿದೆ; ಹಾಗೆಯೇ ನಮಗೂ ಇದೆ. ನಮಗೆ ಸರಕಾರದೊಳಗಿನಅತ್ಯಮೂಲ್ಯ ಸುದ್ದಿಗಳನ್ನು  ನಿರಾಕರಿಸುವ ಬೆದರಿಕೆಯನ್ನೂ ಹಾಕಿದ್ದೀರಿ; ಆದರೆ ಅವುಗಳನ್ನು ಹೇಗೆ ಪಡೆಯಬೇಕೆಂಬುದು ನಮಗೂ ಗೊತ್ತಿದೆ’ ಎಂದು ಪತ್ರದಲ್ಲಿ ಟ್ರಂಪ್‌ ಗೆ ಎಚ್ಚರಿಸಲಾಗಿದೆ. 

“ನಮ್ಮ ವೃತ್ತಿಯನ್ನು ಹೇಗೆ ಮತ್ತು ಯಾವ ಉನ್ನತ ಧ್ಯೇಯೋದ್ದೇಶಗಳೊಂದಿಗೆ ನಡೆಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ; ಆದರೂ ಅತ್ಯಂತ ಮೂಲಭೂ ಪ್ರಶ್ನೆಗಳ ಬಗ್ಗೆ ಮರು ಚಿಂತನೆ ನಡೆಸುವ, ನಾವು ಯಾರೆಂಬ ಆತ್ಮಾವಲೋಕನ ನಡೆಸುವ ಮತ್ತು ನಾವು ಈ ಕ್ಷೇತ್ರದಲ್ಲಿ ಯಾಕೆ ಇದ್ದೇವೆ ಎಂಬುದನ್ನು ಅರಿಯುವ ಅಗತ್ಯವನ್ನು ಮನಗಾಣಿಸಿರವುದಕ್ಕೆ ನಿಮಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಬಹಿರಂಗ ಪತ್ರದಲ್ಲಿ ಟ್ರಂಪ್‌ ಗೆ ಮಾಧ್ಯಮಗಳು ಎಚ್ಚರಿಸಿವೆ. 

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.