ಕುಲಭೂಷಣ್ ಜಾಧವ್ರನ್ನು ಕೂಡಲೇ ಗಲ್ಲಿಗೇರಿಸಿ :ಸುಪ್ರೀಂಗೆ ಅರ್ಜಿ
Team Udayavani, May 28, 2017, 2:53 PM IST
ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮಾಜಿ ಸೆನೆಟ್ ಅಧ್ಯಕ್ಷರಾಗಿರುವ ಫಾರೂಕ್ ನಾಯಕ್ ಅರ್ಜಿ ಸಲ್ಲಿಸಿದ್ದು, ಅಂತಾರಾಷ್ಟ್ರೀಯ ನ್ಯಾಯಾಲಯ ತಂದಿರುವ ತಡೆ ದೇಶೀಯ ಕಾನೂನಿನಡಿಯಲ್ಲಿ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಹೀಗಾಗಿ ಕೂಡಲೇ ಅವರನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಲಾಗಿದೆ.
ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೊಳಗಾಗಿದೆ. ಗಲ್ಲು ಶಿಕ್ಷೆಗೆ ತಡೆ ವಿಧಿಸಿದ್ದ ನ್ಯಾಯಾಲಯ ಕಡೇ ಆದೇಶದ ವರೆಗೆ ಪಾಕಿಸ್ತಾನ ಜಾಧವ್ರನ್ನು ಗಲ್ಲಿಗೇರಿಸಕೂಡದು. ಹಾಗೆಯೇ ಅವರಿಗೆ ವಕೀಲರ ನೆರವು ನೀಡಬೇಕು ಎಂದು ಸೂಚಿಸಿದೆ.