ಸಿರಿಯ ವಾಯು ನೆಲೆ ಸಮೀಪ ರಶ್ಯ ಸೇನಾ ವಿಮಾನ ಪತನ; 39 ಸಾವು
Team Udayavani, Mar 7, 2018, 10:39 AM IST
ಬೇರೂತ್ : ರಶ್ಯದ ಸೇನಾ ಸರಕು ಸಾಗಣೆ ವಿಮಾನವೊಂದು ಸಿರಿಯದಲ್ಲಿನ ವಾಯು ನೆಲೆ ಸಮೀಪ ಪತನಗೊಂಡು ಅದರೊಳಗಿದ್ದ ಎಲ್ಲ 39 ಮಂದಿ ರಶ್ಯ ಸೇವಾ ಸಿಬಂದಿಗಳು ಮೃತಪಟ್ಟ ದುರ್ಘಟನೆ ವರದಿಯಾಗಿದೆ. ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಶ್ಯಕ್ಕೆ ಇದು ಭಾರೀ ದೊಡ್ಡ ಹೊಡೆತ ಮತ್ತು ಹಿನ್ನಡೆ ಎಂದು ತಿಳಿಯಲಾಗಿದೆ.
ವಿಮಾನ ಪತನಗೊಂಡೊಡನೆಯೇ ರಶ್ಯದ ಸೇನೆ “ನಮ್ಮ ವಿಮಾನವನ್ನು ಹೊಡೆದುರುಳಿಸಲಾಗಿಲ್ಲ; ಅದು ತಾಂತ್ರಿಕ ಪ್ರಮಾದದಿಂದ ಪತನಗೊಂಡಿದೆ’ ಎಂದು ಹೇಳಿಕೊಂಡಿದೆ.
ಈ ನಡುವೆ ಬಂಡುಕೋರರ ವಶದಲ್ಲಿರುವ ಡಮಾಸ್ಕಸ್ ಪೂರ್ವ ಹೊರವಲಯದಲ್ಲಿನ ನಡೆಸಲಾಗಿರುವ ಶೆಲ್ಲಿಂಗ್ಗೆ ಹಲವು ಡಜನ್ ಮಂದಿ ಕಳೆದ 24 ತಾಸುಗಳಲ್ಲಿ ಬಲಿಯಾಗಿರುವುದಾಗಿ ವರದಿಯಾಗಿದೆ.
ರಶ್ಯ ಬೆಂಬಲಿತ ಅಧ್ಯಕ್ಷ ಬಶರ್ ಅಸಾದ್ ಸರಕಾರ ರಶ್ಯನ್ ಸೇನೆಯ ಬೆಂಗಾವಲಿನಲ್ಲಿ ಬಂಡುಕೋರರ ತಾಣಗಳ ಮೇಲೆ ಶೆಲ್ ದಾಳಿ ಮುಂದುವರಿಸಿದೆ.
ಇದೇ ವೇಳೆ ಮಾನವ ಹಕ್ಕು ಸಂಘಟನೆಗಳ ಅಂತಾರಾಷ್ಟ್ರೀಯ ಸೇವಾ ಕಾರ್ಯಕರ್ತರು ಬಾಂಬ್ ದಾಳಿಯ ಪರಿಣಾಮವಾಗಿ ಧರಾಶಾಯಿಯಾಗಿರುವ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿಕೊಂಡವರನ್ನು ಪಾರುಗೊಳಿಸುವ, ಕಳೆದ ಹದಿನೈದು ದಿನಗಳಿಂದ ಸೂರ್ಯನ ಬೆಳಕನ್ನೇ ಕಾಣದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ