ಉಜ್ಭೇಕಿಸ್ತಾನ್ ಡ್ಯಾಂ ಒಡೆದು ಹೋಗಿ ಸಾವಿರಾರು ಮಂದಿ ಸ್ಥಳಾಂತರ; ಕ್ರಿಮಿನಲ್ ತನಿಖೆ ಆರಂಭ
ಡ್ಯಾಂ ಒಡೆದು ಹೋದ ಪರಿಣಾಮ ಉಜ್ಬೇಕಿಸ್ತಾನದ 22 ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 70 ಸಾವಿರ ಜನರ ಸ್ಥಳಾಂತರ
Team Udayavani, May 3, 2020, 8:08 PM IST
ತಾಷ್ಕೆಂಟ್: ಸೈರ್ ಡೇರಿಯಾ ನದಿ ಪಾತ್ರದಲ್ಲಿ ನಿರ್ಮಿಸಿದ್ದ ಡ್ಯಾಂ ಒಡೆದು ಹೋದ ಪರಿಣಾಮ ಉಜ್ಬೇಕಿಸ್ತಾನ್ ಮತ್ತು ಕಝಕ್ ಸ್ತಾನ್ ನ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ನೂತನವಾಗಿ ಕಟ್ಟಿಸಿರುವ ಡ್ಯಾಂ ಒಡೆದು ಹೋದ ನಂತರ ಉಜ್ಭೇಕ್ ಸರ್ಕಾರ ಕ್ರಿಮಿನಲ್ ತನಿಖೆ ನಡೆಸುತ್ತಿದೆ.
ಡ್ಯಾಂ ಒಡೆದು ಹೋದ ಪರಿಣಾಮ ಉಜ್ಬೇಕಿಸ್ತಾನದ 22 ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 70 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ, 50ಸಾವಿರಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಷ್ಕೆಂಟ್ ಸರ್ಕಾರ ತಿಳಿಸಿದೆ. ಕಝಕ್ ನ್ ದಲ್ಲಿನ ದಕ್ಷಿಣ ಟುರ್ಕೆಸ್ತಾನ್ ಪ್ರಾಂತ್ಯದಲ್ಲಿನ ನಾಲ್ಕು ಗ್ರಾಮಗಳಲ್ಲಿ ಇರುವ 5,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯಪಾಲ ಉಮಿರ್ ಝಾಕ್ ಶುಕೇಯೇವ್ ತಿಳಿಸಿದ್ದಾರೆ.
ಗ್ರಾಮಗಳಲ್ಲಿ ತುಂಬಿರುವ ನೀರನ್ನು ಸ್ಥಳೀಯ ಲೇಕ್(ಸರೋವರ)ಗಳಿಗೆ ಡೈವರ್ಟ್ ಮಾಡುವ ಮೂಲಕ ನೀರಿನ ಪ್ರಮಾಣವನ್ನು ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಜ್ಬೇಕ್ ಸರ್ಕಾರ ವಿವರಿಸಿದೆ. ದಕ್ಷಿಣ ಕಝಕ್ ಸ್ತಾನದಲ್ಲಿರುವ 600ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.
ಉಜ್ಬೇಕಿಸ್ತಾನದ ಹಾಲಿ ಅಧ್ಯಕ್ಷ ಶೌಕತ್ ಮಿರಿಝಿಯೋವ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಡ್ಯಾಂ ಕಾಮಗಾರಿ ಆರಂಭಗೊಂಡಿತ್ತು. ಸತತ ಏಳು ವರ್ಷಗಳ ಕಾಮಗಾರಿ ನಂತರ 2017ರಲ್ಲಿ ಕೆಲಸ ಪೂರ್ಣಗೊಂಡಿತ್ತು. ಮೇ ಒಂದರಂದು ಸುರಿದು ಭಾರೀ ಗಾಳಿ ಮಳೆಗೆ ಡ್ಯಾಂ ಒಡೆದು ಹೋಗಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ