ದುಡ್ಡಿಲ್ಲದೆ ಸ್ಥಳೀಯ ಚುನಾವಣೆ ಮುಂದೂಡಿದ ಶ್ರೀಲಂಕಾ
Team Udayavani, Feb 22, 2023, 8:10 AM IST
ಕೊಲೊಂಬೊ : ಚುನಾವಣೆಗೆ ಬೇಕಿರುವ ಬ್ಯಾಲೆಟ್ ಪೇಪರ್ ಮುದ್ರಿಸಲು ಹಣವಿಲ್ಲದ ಕಾರಣ, ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾ ಮುಂದಿನ ತಿಂಗಳು ನಡೆಯಬೇಕಿದ್ದ ಸ್ಥಳೀಯ ಚುನಾವಣೆಯನ್ನೇ ಮುಂದೂಡಿದೆ. ಈ ಕುರಿತು ಲಂಕಾ ಸುಪ್ರೀಂಕೋರ್ಟ್ಗೆ ಚುನಾವಣೆ ಆಯೋಗ ಮಾಹಿತಿ ನೀಡಿದೆ.
ಬ್ಯಾಲೆಟ್ ಪೇಪರ್ ಮುದ್ರಣ, ಇಂಧನ ಹಾಗೂ ಭದ್ರತಾ ವ್ಯವಸ್ಥೆಗೆ ಬೇಕಿರುವ ಹಣವನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ವಿತ್ತ ಇಲಾಖೆ ತಿಳಿಸಿದೆ.
ಈ ಹಿನ್ನೆಲೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದಿದೆ. ಕಳೆದ ವರ್ಷ ರಾಷ್ಟ್ರದ ಆರ್ಥಿಕ ದಿವಾಳಿತನದ ವಿರುದ್ಧ ಜನರು ನಡೆಸಿದ ಭಾರೀ ಪ್ರತಿಭಟನೆಗಳ ಬಳಿಕ ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾ.9ರಂದು ನಡೆಯಬೇಕಿದ್ದ ಚುನಾವಣೆ ಅವರಿಗೆ ಬೆಂಬಲ ನೀಡುವಲ್ಲಿ ಮಹತ್ವ ಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ