ಪುತ್ತಿಗೆಶ್ರೀ ಪರ್ಯಾಯ: ಪಾಜಕದ ಅನಂತದಿಂದ ಬದರಿಯ ಅನಂತದವರೆಗೆ…
1980ರ ದಶಕದಲ್ಲಿ ಉಡುಪಿ ಮಠವನ್ನು ಸ್ಥಾಪಿಸುವಾಗ ಅನಂತ ಮಠ ಎಂದು ಹೆಸರು ಇಟ್ಟಿದ್ದರು
Team Udayavani, Jan 18, 2024, 11:31 AM IST
ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕ ಕ್ಷೇತ್ರದಲ್ಲಿರುವುದು ಅನಂತಪದ್ಮನಾಭನ ಮಂದಿರ. ಅವರ ತಂದೆ ಪುತ್ರಪ್ರಾಪ್ತಿಗಾಗಿ ಬೇಡಿದ್ದು ಉಡುಪಿಯ ಅನಂತೇಶ್ವರನನ್ನು. ಅನಂತೇಶ್ವರನ ಸನ್ನಿಧಿಯಲ್ಲಿ ಈಗಲೂ ಪುತ್ರಪ್ರಾಪ್ತಿಯ ಕಾರಣಿಕ ನಡೆಯುತ್ತಿದೆ ಎಂಬ ನಂಬಿಕೆ ಇದೆ.
ಅಂತಿಮ ದಿನ ಆಚಾರ್ಯ ಮಧ್ವರು ಐತರೇಯ ಉಪನಿಷತ್ತಿನ ಪಾಠವನ್ನು ಹೇಳಿದ್ದು ಅನಂತೇಶ್ವರನ ಸನ್ನಿಧಿಯಲ್ಲಿಯೇ. ಕೊನೆಗೆ ನೆಲೆಸಿದ್ದೂ ಅನಂತಮಠ ಎಂದು ಹೆಸರು ಇರುವ ಉತ್ತರದ ಬದರೀ ಕ್ಷೇತ್ರದಲ್ಲಿ. ಹೀಗಾಗಿಯೇ ಬದರಿಯಲ್ಲಿ ಪೇಜಾವರ ಶ್ರೀಗಳು 1980ರ ದಶಕದಲ್ಲಿ ಉಡುಪಿ ಮಠವನ್ನು ಸ್ಥಾಪಿಸುವಾಗ ಅನಂತ ಮಠ ಎಂದು ಹೆಸರು ಇಟ್ಟಿದ್ದರು.
ಪರ್ಯಾಯ ಪೀಠಸ್ಥರಾಗುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರಿಗೂ “ಅನಂತ’ನಿಗೂ ಅವ್ಯಕ್ತ ವಾದ ನಂಟು ಕಂಡುಬರುತ್ತಿದೆ. ಇವರು ಹುಟ್ಟಿದ್ದು ಕಾಪು ತಾಲೂಕಿನ ಮಾಣಿಯೂರಿನಲ್ಲಿ. ಹುಟ್ಟಿದ ಮನೆಯನ್ನು ಮಾಣಿಯೂರು ಮಠ ಎಂದು ಕರೆಯುತ್ತಾರೆ.
ಇಲ್ಲಿ ಪೂಜೆಗೊಳ್ಳುತ್ತಿರುವುದು ಅನಂತಪದ್ಮನಾಭ. ಈ ಅನಂತ ಪದ್ಮನಾಭನಿಗೂ ಸ್ವಾಮೀಜಿಯಾಗುವ ಮುನ್ನ ಹಯವದನನಾಗಿ ಪುತ್ತಿಗೆ ಶ್ರೀಗಳು ಪೂಜೆ ಸಲ್ಲಿಸಿದ್ದರು. ಪುತ್ತಿಗೆ ಶ್ರೀಗಳವರು ಪ್ರಸ್ತುತ ಉಡುಪಿ ಅನಂತೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರರು.
ಪಣಿಯಾಡಿಯ ಅನಂತ ಪದ್ಮನಾಭ ದೇವಸ್ಥಾನ ಬಹು ಹಿಂದಿನಿಂದಲೂ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟಿದ್ದು ಇತ್ತೀಚೆಗಷ್ಟೇ ಜೀರ್ಣೋದ್ಧಾರಗೊಳಿಸಿದ್ದಾರೆ. ಮಾಣಿಯೂರು ಮಠವನ್ನೂ ಅಭಿವೃದ್ಧಿಗೊಳಿಸಿದ್ದು ಇತ್ತೀಚೆಗೆ ಪುತ್ತಿಗೆ ಶ್ರೀಗಳು ಉದ್ಘಾಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ