ಗಡಿನಾಡಿಗರ ಬದುಕು ಅತಂತ್ರವಾಗಿಸಿದ ಸರಕಾರಗಳು
ಸಣ್ಣ ತಾಂತ್ರಿಕ ಎಡವಟ್ಟು ಇಲ್ಲಿನ ಜನತೆಯನ್ನು ಜೀವನಪೂರ್ತಿ ನಲುಗುವಂತೆ ಮಾಡಿತು.
Team Udayavani
ಕೈಯಾರ, ಕಳ್ಳಿಗೆ, ಕಕ್ಕಿಲ್ಲಾಯರಂತಹ ಮಹಾನ್ ನಾಯಕರು ಕನ್ನಡ ನಾಡಿನಿಂದ ದೂರವಾದ ಗಡಿನಾಡನ್ನು ಮತ್ತೆ ತವರು ರಾಜ್ಯಕ್ಕೆ ಸೇರಿಸಲು ಘನ ಹೋರಾಟವನ್ನೇ ಸಂಘಟಿಸಿದರು. ಫಲಿತಾಂಶ ಮಾತ್ರ ಶೂನ್ಯವಾಗಿ ಕಾಸರಗೋಡು ಇಂದಿಗೂ ಕೇರಳದಲ್ಲೇ ಉಳಿದು ಕೊಂಡಿದೆ. ಇಲ್ಲಿನ ಜನತೆಗೆ ಅತ್ತ ಕರ್ನಾಟಕ ಹೊರ ರಾಜ್ಯದವರೆಂದೂ ಇತ್ತ ಕೇರಳ ಅನ್ಯಭಾಷಿಗರೆಂದೂ ಹಣೆಪಟ್ಟಿಯನ್ನು ಕಟ್ಟಿರುವ ಕಾರಣ ಅವರು ಮಾನಸಿಕ ಹಿಂಸೆ ಅನುಭವಿಸುವ ಸಂದರ್ಭಗಳು ಆಗಾಗ ಎದುರಾಗುತ್ತಿರುತ್ತವೆ. ಪ್ರಸ್ತುತ ಕೋವಿಡ್ ನಿಯಂತ್ರಣದ ಸಂದರ್ಭದಲ್ಲಂತೂ ಈ ಗಡಿನಾಡಿಗರ ಬದುಕು ಹೈರಾಣಾಗಿ ಹೋಗಿದೆ...