ಪಂಚರಾಜ್ಯ ಚುನಾವಣೆ:ಇನ್ನು ಎರಡು ದಿನಗಳಲ್ಲಿ ಸಿಗಲಿದೆ ಉತ್ತರ
ಸಣ್ಣ ಮಟ್ಟಿಗೆ ಶಮನ ಮಾಡಲು ನೋಡಿದ್ದರೂ ಅದೆಷ್ಟು ಫಲ ಕೊಟ್ಟಿದೆ ಎಂಬುದು ಫಲಿತಾಂಶದಿಂದಷ್ಟೇ ತಿಳಿಯಬೇಕಿದೆ.
Team Udayavani
- ಪುತ್ತಿಗೆ ಪದ್ಮನಾಭ ರೈ
ಉತ್ತರ ಪ್ರದೇಶದ ಚುನಾವಣೆಯು ಸಂಪೂರ್ಣವಾಗಿ ರಾಜ್ಯದ ವಿಷಯಕ್ಕೆ ಸೀಮಿತವಾ ಗಿಲ್ಲ. ಅದರಲ್ಲಿ ಕೇಂದ್ರದ ಆಡಳಿತದ ಪ್ರತಿ ಬಿಂಬವೂ ಕಂಡು ಬರುವ ಕಾರಣ ಮೋದಿ ಸರಕಾರಕ್ಕೆ ಮತ ದಾರರು ನೀಡಿರುವ ಅಂಕಗಳು ಇಲ್ಲಿನ ಫಲಿತಾಂಶವನ್ನು ನಿರ್ಣ ಯಿಸುತ್ತದೆ ಎಂಬುದು ಒಪ್ಪತಕ್ಕ ಮಾತು. ಇದು ಯೋಗಿಗೆ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಮೋದಿಗೆ ಮುಖ್ಯವಾಗಿದೆ. ಒಂದೊಮ್ಮೆ ಈ ಬಾರಿ ಉತ್ತರ ಪ್ರದೇಶವನ್ನು ಕಳೆದುಕೊಂಡರೆ ಮುಂದಿನ ಬಾರಿ ಬಿಜೆಪಿಗೆ ಸಂಸತ್ ಚುನಾವಣೆ ಕಬ್ಬಿಣದ ಕಡಲೆಯಾಗಬಹುದು. ಆ ಕಾರಣದಿಂದಲೇ ಪ್ರಧಾನಿ, ಗೃಹ ಸಚಿವ ಅಮಿತ್ ಶಾ ಅವರಂಥ ಘಟಾನುಘಟಿಗಳು ಕೂಡ ಪ್ರಚಾರದಲ್ಲಿ ಧೂಳೆಬ್ಬಿಸಿದ್ದಾರೆ. ಮೋದಿಯವರು ಮತ ದಾರರು ಮನ ಗೆಲ್ಲಲು ವಿಶೇಷವಾಗಿ ಶ್ರಮಿಸಿದ್ದಾರೆ. ಪ್ರಚಾರದ ಅಬ್ಬರದಲ್ಲಿ ಬಿಜೆಪಿ ಕಿಂಚಿತ್ತೂ ಹಿನ್ನಡೆ ಅನುಭವಿಸಿಲ್ಲ. ಹಾಗೆಂದು ಅದುವೇ ಫಲಿತಾಂಶ ನಿರ್ಣಯಿಸುತ್ತದೆ ಎಂದು ಹೇಳುವುದೂ ಕಷ್ಟ...